ಪೋಲಿಸ್ ಉಪ ವಿಭಾಗದ ನೂತನ ಅಧಿಕಾರ ವಹಿಸಿಕೊಂಡ DSP ರವಿ ಡಿ ನಾಯಿಕ ಅವರಿಗೆ ಸತ್ಕಾರ
ಗೋಕಾಕ:ಗೋಕಾಕ ನಗರದ ಪೋಲಿಸ್ ಉಪ ವಿಭಾಗದ ನೂತನ ಅಧಿಕಾರ ವಹಿಸಿಕೊಂಡ ಡಿ ಎಸ್ ಪಿ ಸಾಹೇಬರಾದ ರವಿ ಡಿ ನಾಯಿಕ ಅವರಿಗೆ ಕನ್ನಡ ರಕ್ಷಣಾ ವೇದಿಕೆ ಹಾಗೂ ಕನ್ನಡ ಸೇನೆ ಕರ್ನಾಟಕ ಸಂಘಟನೆ ವತಿಯಿಂದ ಸತ್ಕರಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಡಾ.ಕೆಂಪಣ್ಣ ಚೌಕಶಿ, ಕನ್ನಡ ಸೇನೆ ಗೋಕಾಕ ತಾಲೂಕ ಅಧ್ಯಕ್ಷರಾದ ಅಪ್ಪಾಸಾಬ ಮುಲ್ಲಾ, ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ್ ಮಾಹಾಜನ್, ಕರವೇ ಮೂಡಲಗಿ ತಾಲೂಕಾ ಉಸ್ತುವಾರಿ ಅಧ್ಯಕ್ಷರಾದ ರಾಘವೇಂದ್ರ ಕುಡ್ಡೇಮ್ಮಿ, ಕರವೇ ಗೋಕಾಕ್ ತಾಲೂಕ ಸಂಚಾಲಕರಾದ ಸಿದ್ದಪ್ಪ ತಳಗೇರಿ, ಕರವೇ ದುಪಧಾಳ ಘಟಕದ ಅಧ್ಯಕ್ಷರಾದ ಕಲ್ಲೋಳೆಪ್ಪ ಗಾಡಿವಡ್ಡರ, ಕರವೇ ಬೆಳಗಾವಿ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಶಶಿಧರ್ ಚೌಕಶಿ,ಸುನೀಲ್ ಗಾಯಕವಾಡ,ಕಿರಣ ಶಿವಾಳೆ, ನ್ಯಾಯವಾದಿ ಬಿ ಎನ್ ಸಂಪಗಾರ. ಮುಂತಾದವರು ಉಪಸ್ಥಿತರಿದ್ದರು.