ದಿನದ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ ಅವರ ನೇತೃತ್ವದ ಮಾನವ ಬಂಧುತ್ವ ವೇದಿಕೆ ಕರ್ನಾಟಕ ರಾಜ್ಯಾದ್ಯಂತ ಜನಸಮುದಾಯದಲ್ಲಿ ವೈಚಾರಿಕ ಜಾಗೃತಿ ಮತ್ತು ಸ್ವಾಭಿಮಾನವನ್ನು ಮೂಡಿಸುವಲ್ಲಿ ಅನೇಕ ಕಾರ್ಯಕ್ರಮಗಳನ್ನು ಸಂಘಟಿಸುತ್ತ ಬರ್ತಿದೆ ಇವುಗಳಲ್ಲಿ ಪ್ರತಿವರ್ಷ ಬಾಬಾಸಾಹೇಬ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನವಾದ ಡಿಸೆಂಬರ್ 6ರಂದು ಸಂಘಟಿಸುತ್ತಿರುವ ವಿರೋಧಿ ಪರಿವರ್ತನಾ ದಿನ ಪ್ರಮುಖವಾಗಿದೆ ಕಳೆದ ವರ್ಷದಂತೆ ಈ ವರ್ಷವೂ ಕೂಡ ಡಿಸೆಂಬರ್ 6 2020 ರಂದು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನವನ್ನು ಗೋಕಾಕದ ಮರಾಠ ಸಮಾಜದ ಸ್ಮಶಾನ ಭೂಮಿಯಲ್ಲಿ ಆಚರಿಸಲಾಗುತ್ತದೆ ಅಂದು ಬೆಳಗ್ಗೆ 11 ಗಂಟೆಗೆ ವೈಚಾರಿಕ ಕಾರ್ಯಕ್ರಮ ಜರಗಿ ಮಧ್ಯಾಹ್ನ ಸ್ಮಶಾನದಲ್ಲಿ ಸತೀಶ ಜಾರಕಿಹೊಳಿಯವರು ಕಾರ್ಯಕರ್ತರೊಂದಿಗೆ ಊಟಮಾಡುತ್ತಾರೆ ಈ ವೈಚಾರಿಕ ಕಾರ್ಯಕ್ರಮದಲ್ಲಿ ನಾಡಿನ ಪ್ರಗತಿಪರ ಸ್ವಾಮೀಜಿಗಳು ಚಿಂತಕರು ಹಾಗೂ ವಿಚಾರವಾದಿಗಳು ಭಾಗವಹಿಸಲಿದ್ದಾರೆ ಕೂರೋನಾಇರುವ ಕಾರಣ ಕಾರ್ಯಕ್ರಮವನ್ನು ಕೋರೋಣ ನಿಯಮಾವಳಿಗಳನ್ನು ಪಾಲಿಸುವ ಮೂಲಕ ಸರಳವಾಗಿ ಆಚರಿಸಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು ಮಾನವ ಬಂಧುತ್ವ ವೇದಿಕೆ ರಾಜ್ಯಾಧ್ಯಕ್ಷರು ರವೀಂದ್ರ ನಾಯ್ಕರ ವಿವೇಕ್ ಜತ್ತಿ ರಿಯಾಜ್ ಚೌಗಲಾ ಮುನ್ನಾ ಭಾಗವಾನ್ ಉಪಸ್ಥಿತರಿದ್ದರು
![](https://fast9news.com/wp-content/uploads/2020/12/Screenshot_2020-12-04-14-31-22-475_com.whatsapp-660x330.png)