Breaking News

ಡಿ.26ರಂದು ಹಳೆ ಪಿಂಚಣಿ ಕುರಿತು ಸುವರ್ಣಸೌದದ ಎದುರು ಪ್ರತಿಭಟನೆ

Spread the love

ಡಿ.26ರಂದು ಹಳೆ ಪಿಂಚಣಿ ಕುರಿತು ಸುವರ್ಣಸೌದದ ಎದುರು ಪ್ರತಿಭಟನೆ

ಬಾದಾಮಿ: ಅನುದಾನಿತ ನೌಕರರಿಗೆ ಹಳೆ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ಡಿ.26ರಂದು ಬೆಳಗಾವಿಯ ಸುವರ್ಣಸೌಧದ ಎದುರು ಒಂದು ದಿನದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅನುದಾನಿತ ನೌಕರರ ಸಂಘದ ತಾಲೂಕಾ ಅಧ್ಯಕ್ಷ ಎಸ್ ಬಿ ಪವಾಡಶೆಟ್ಟಿ ತಿಳಿಸಿದರು.
ಅವರು ಗುರುವಾರ ವೀರಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆಯಲ್ಲಿ ಅನುದಾನಿತ ನೌಕರರಿಗೆ ಪಿಂಚಣಿಗೆ ಆಗ್ರಹಿಸಿ ಡಿ.26ರಂದು ಭಾಗವಹಿಸಲು ಕೋರಿ ಮನವಿ ಪತ್ರ ಸಲ್ಲಿಸಿ ಮಾತನಾಡಿದರು. ತಾಲೂಕಿನ ಎಲ್ಲ ಅನುದಾನಿತ ನೌಕರರು ಇದರಲ್ಲಿ ತಪ್ಪದೇ ಭಾಗವಹಿಸಿ ಧರಣಿ ಯಶಸ್ವಿಗೊಳಿಸಬೇಕು. ಈಗಾಗಲೇ ಅನುದಾನಿತ ಸಂಸ್ಥೆಯವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಅನುದಾನಿತ ನೌಕರರಾದ ಬಿ.ಬಿ.ಮುದಕನಗೌಡರ, ವಿಜಯ ಲಮಾಣಿ, ನೇತ್ರಾ ಪಲ್ಲಕ್ಕಿ, ಬಸವರಾಜ ಮಾದರ, ರಮೇಶ ಲಮಾಣಿ, ಪುಟ್ಟೇಶ ಲಮಾಣಿ ಡಾ.ಪಾರ್ವತಿ ಲೆಂಕನ್ನವರ, ಕೆ.ವೈ.ಪಾಟೀಲ, ಸಿ ಎ ಮಾಳವಾಡ ವಿದ್ಯಾವತಿ ಬಾಣದ, ಎ.ಆರ್.ನಾಯಕ, ಎಂ.ಆರ್.ಹುಲ್ಲೂರ, ಪಿ.ಎಸ್‌. ಜವಳಿ, ಬಿ.ಎಲ್.ಹೂಲಿ, ಎಂ.ಆರ್.ಪಾಟೀಲ, ಬಿ.ಜಿ.ರೇವಡಿ ಇದ್ದರು.

ವರದಿ. ಕನಕಪ್ಪ ಶಾಂತಗೇರಿ,ಬಾದಾಮಿ


Spread the love

About Fast9 News

Check Also

ಅರ್ದ ದೇಹ ಸುಟ್ಟ ಮಹಿಳೆಯ ಶವ ಪತ್ತೆ.ಸಾಕ್ಷ ನಾಶ ಪಡಿಸಲು ಎಸಗಿರುವ ಕೃತ್ಯ. ಪೋಲೀಸರಿಂದ ತನಿಖೆ*

Spread the love*ಅರ್ದ ದೇಹ ಸುಟ್ಟ ಮಹಿಳೆಯ ಶವ ಪತ್ತೆ.ಸಾಕ್ಷ ನಾಶ ಪಡಿಸಲು ಎಸಗಿರುವ ಕೃತ್ಯ. ಪೋಲೀಸರಿಂದ ತನಿಖೆ* ಗೋಕಾಕ …

Leave a Reply

Your email address will not be published. Required fields are marked *