Breaking News

ಮಹಾನ್ ಪುರುಷರನ್ನು ಒಂದೇ ಸಮಾಜಕ್ಕೆ ಸೀಮಿತ ಮಾಡಬಾರದು: ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love

ಮಹಾನ್ ಪುರುಷರನ್ನು ಒಂದೇ ಸಮಾಜಕ್ಕೆ ಸೀಮಿತ ಮಾಡಬಾರದು: ಶಾಸಕ ಬಾಲಚಂದ್ರ ಜಾರಕಿಹೊಳಿ

ಅರಭಾವಿ ಕ್ಷೇತ್ರದ ಜನರನ್ನು ಪಡೆದಿರುವುದು ನನ್ನ ಪುಣ್ಯ. ಯಾರಿಗೂ ಇಂತಹ ಜನರು ಸಿಗುವುದಿಲ್ಲ.

ಗೋಕಾಕ- ಮಹಾನ್ ಪುರುಷರ ಜಯಂತಿ ಕಾರ್ಯಕ್ರಮಗಳನ್ನು ಎಲ್ಲ ಜಾತಿಯವರು ಸೇರಿಕೊಂಡು ಆಚರಿಸಿದರೆ ಮಾತ್ರ ಅಂತಹ ಕಾರ್ಯಕ್ರಮಗಳಿಗೆ ಶೋಭೆ ಬರುತ್ತದೆ. ಕೇವಲ ಒಂದು ಸಮುದಾಯಕ್ಕೆ ಸೀಮಿತಗೋಳಿಸದೇ ಒಗ್ಗಟ್ಟಿನಿಂದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಆಚರಿಸುವ ಮೂಲಕ ಸ್ವಾತಂತ್ರö್ಯ ಹೋರಾಟಗಾರರಿಗೆ ಗೌರವ ಸಲ್ಲಿಸುವ ಕಾರ್ಯಕ್ಕೆ ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲ್ಲೂಕಿನ ಕೌಜಲಗಿ ಗ್ರಾಮದ ಬಸವೇಶ್ವರ ಪೇಟೆಯಲ್ಲಿ ಮಂಗಳವಾರದAದು ಜರುಗಿದ ಕಿತ್ತೂರು ರಾಣಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಾನ್ ಪುರುಷರನ್ನು ಒಂದೇ ಸಮಾಜಕ್ಕೆ ಸೀಮಿತ ಮಾಡಬಾರದೆಂದು ಅವರು ಕಿವಿಮಾತು ಹೇಳಿದರು.
ಅರಭಾವಿ ಕ್ಷೇತ್ರದಲ್ಲಿ ಕಳೆದ ಎರಡು ವರ್ಷಗಳಿಂದ ಎಲ್ಲ ಮಹಾನ್ ಪುರುಷರ ಜಯಂತಿ ಉತ್ಸವ ಕಾರ್ಯಕ್ರಮಗಳನ್ನು ಎಲ್ಲ ಜಾತಿಯ ಜನರೊಂದಿಗೆ ಆಚರಿಸಲಾಗುತ್ತಿದೆ. ಈ ಮೂಲಕ ನಮ್ಮ ಜನರು ಸಾಮರಸ್ಯವನ್ನು ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ. ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಭಗೀರಥ ಮಹರ್ಷಿ, ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ವಿವಿಧ ಮಹಾನ್ ಪುರುಷರ ಜಯಂತಿ ಕಾರ್ಯಕ್ರಮಗಳನ್ನು ದೊಡ್ಡ ಮಟ್ಟದಲ್ಲಿ ಆಚರಿಸುತ್ತಾ ಬರುತ್ತಿದ್ದೇವೆ. ಜೊತೆಗೆ ಸಣ್ಣ ಜಾತಿಗೆ ಸೇರಿರುವ ದಾರ್ಶನಿಕ ಪುರುಷರ ಸ್ಮರಣೆ ಮಾಡುವ ಮೂಲಕ ಎಲ್ಲ ವರ್ಗದವರನ್ನು ಸಮಾನವಾಗಿ ಕಾಣುತ್ತಿದ್ದೇವೆ ಎಂದು ಅವರು ತಿಳಿಸಿದರು.
ಜನರ ಆಶೀರ್ವಾದದಿಂದ ಚುನಾಯಿತಗೊಂಡು ಪ್ರಮಾಣ ವಚನ ಮಾಡುವ ನಾವುಗಳು ಅದರಂತೆ ನಡೆದುಕೊಳ್ಳಬೇಕಿದೆ. ರಾಗ, ದ್ವೇಷ, ಅಸೂಯೆಗಳನ್ನು ಮರೆತು ಜನರಿಗೆ ಅಗತ್ಯವಿರುವ ಕೆಲಸ ಮಾಡಬೇಕು. ಅವರುಗಳ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವನೆಗಳನ್ನು ಬೆಳೆಸಿಕೊಳ್ಳಬೇಕು. ಜನರ ಪ್ರೀತಿ, ವಿಶ್ವಾಸಕ್ಕೆ ಚ್ಯುತಿ ತರದೇ ಅವರ ಭಾವನೆಗಳನ್ನು ಗೌರವಿಸುವ ಕೆಲಸವನ್ನು ನಮ್ಮಂತಹ ಜನ ಪ್ರತಿನಿಧಿಗಳು ಮಾಡಬೇಕಿದೆ. ನಾವು ಮಾಡುವ ಯಾವುದೇ ಕೆಲಸಗಳು ಜನರ ಹೃದಯ ತಲುಪಬೇಕು. ಹೊರತು ನಮ್ಮನ್ನು ಸಾರ್ವಜನಿಕವಾಗಿ ಕೆಟ್ಟದಾಗಿ ಮಾತಾಡುವ ಮುನ್ನವೇ ಅಧಿಕಾರದಿಂದ ಕೆಳಗಿಳಿಯಬೇಕು. ಅಧಿಕಾರ ಎಂದಿಗೂ ಶಾಶ್ವತವಲ್ಲ. ಆದರೆ ಅಧಿಕಾರ ಸಿಕ್ಕಾಗ ಕಷ್ಟ ಕಾಲದಲ್ಲಿ ನಿಂತ ಜನರನ್ನು ನಾವು ಎಂದಿಗೂ ಮರೆಯಬಾರದು ಎಂದು ಹೇಳಿದರು.
ಅರಭಾವಿ ಕ್ಷೇತ್ರದ ಜನರನ್ನು ಪಡೆದಿರುವುದು ನನ್ನ ಪುಣ್ಯ. ಯಾರಿಗೂ ಇಂತಹ ಜನರು ಸಿಗುವುದಿಲ್ಲ. ನಮ್ಮ ಮಂಡಲದಲ್ಲಿ ಬಿಜೆಪಿ ಸದಸ್ಯತ್ವ ನೋಂದಣಿ ಪ್ರಕ್ತಿಯೆ ನಿಧಾನವಾಗಿ ನಡೆದಾಗ ಇತ್ತಿಚೆಗೆ ಸಭೆ ನಡೆಸಿ ವಿನಂತಿ ಮಾಡಿಕೊಂಡಾಗ ಅದಕ್ಕೆ ಸ್ಪಂದಿಸಿದ ನಮ್ಮ ಮುಖಂಡರು ೩ ದಿನದಲ್ಲಿ ಸುಮಾರು ೨೦ ಸಾವಿರ ಸದಸ್ಯರನ್ನು ನೋಂದಣಿ ಮಾಡಿಸಿದರು. ಈ ಮೂಲಕ ನನ್ನ ಮಾತಿಗೆ ಬೆಲೆ ನೀಡಿದರು ಎಂದು ಖುಷಿಯನ್ನು ಹಂಚಿಕೊAಡರು.
ಕೌಜಲಗಿ ತಾಲ್ಲೂಕಾ ರಚನೆಗೆ ಕ್ರಮ- ಆಡಳಿತಾತ್ಮಕ ದೃಷ್ಟಿಯಿಂದ ಕೌಜಲಗಿ ಹೊಸ ತಾಲ್ಲೂಕು ರಚನೆಯಾಗಬೇಕಿದೆ. ಕಳೆದ ೪೦ ವರ್ಷಗಳಿಂದ ಕೌಜಲಗಿ ಮತ್ತು ಸುತ್ತಲಿನ ಗ್ರಾಮಸ್ಥರು ಸೇರಿಕೊಂಡು ಒಂದಾಗಿ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಇದಕ್ಕೆ ಎಲ್ಲ ರೀತಿಯಿಂದಲೂ ಸಹಕಾರ ನೀಡಲು ಸಿದ್ಧನಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಯವರ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಭೇಟಿ ಮಾಡಿ ಮತ್ತೊಮ್ಮೆ ಮನವಿ ಮಾಡಿಕೊಳ್ಳೋಣ ಎಂದು ತಿಳಿಸಿದರು. ಕೌಜಲಗಿಗೆ ಅಗತ್ಯವಿರುವ ರಾಷ್ಟಿçÃಕೃತ ಬ್ಯಾಂಕ್ ತೆರೆಯಲು ಸಂಬAಧಪಟ್ಟವರಿಗೆ ಈಗಾಗಲೇ ಪತ್ರ ವ್ಯವಹಾರವನ್ನು ಮಾಡಲಾಗಿದೆ. ಸಂಸತ್ ಸದಸ್ಯ ಜಗದೀಶ ಶೆಟ್ಟರ್ ಮೂಲಕ ಪ್ರಯತ್ನಿಸುವ ವಾಗ್ದಾನ ಮಾಡಿದರು.
ಕೌಜಲಗಿ ಭಾಗದ ರೈತರಿಗೆ ಈಗಾಗಲೇ ಕಲ್ಮಡ್ಡಿ ಯೋಜನೆಯನ್ನು ಸಾಕಾರಗೊಳಿಸಲಾಗಿದೆ. ಇದನ್ನು ರೈತರು ಸದ್ಭಳಕೆ ಮಾಡಿಕೊಳ್ಳಬೇಕು. ಬೇಸಿಗೆಯ ಸಮಯದಲ್ಲಿ ಕೌಜಲಗಿ ರೈತರಿಗೆ ಅನ್ಯಾಯವಾಗಬಾರದು. ಇತರೆ ಗ್ರಾವiಗಳ ರೈತರು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.
ಮಳೆಯಿAದಾಗಿ ಕ್ಷೇತ್ರದ ಕೆಲ ರಸ್ತೆಗಳು ಹದಿಗೆಟ್ಟಿವೆ. ಇವುಗಳ ದುರಸ್ಥಿ ಕಾರ್ಯಗಳಿಗೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ೬೦ ಕೋ.ರೂ. ಅನುದಾನ ನೀಡುವಂತೆ ಕೋರಲಾಗಿದೆ. ಈಗೀರುವುದು ಕಾಂಗ್ರೆಸ್ ಸರ್ಕಾರ. ಅಭಿವೃದ್ಧಿಗೆ ಹಣ ನೀಡುತ್ತಿಲ್ಲ. ನಾನೇನೂ ಮಾಡಲಿ? ನಮ್ಮ ಬಿಜೆಪಿ ಸರ್ಕಾರವಿದ್ದಾಗ ಬಡೆದಾಡಿ ಅನುದಾನ ತರುತ್ತಿದ್ದೆ. ಈಗವರು ಕೊಡುತ್ತಿಲ್ಲ. ಇದರಲ್ಲಿ ನನ್ನ ತಪ್ಪು ಇಲ್ಲ. ಬೈಯುದಿದ್ದರೆ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿ. ನನ್ನನ್ನಲ್ಲ. ಎಂದು ಹಾಸ್ಯದಿಂದಲೇ ಕಾಂಗ್ರೆಸ್ ಸರ್ಕಾರವನ್ನು ಕಾಲೆಳೆದರು.
ಕಾರ್ಯಕ್ರಮದ ಸಾನಿಧ್ಯವನ್ನು ಸುಣಧೋಳಿಯ ಶಿವಾನಂದ ಮಹಾಸ್ವಾಮಿಗಳು, ಭಾಗೋಜಿಕೊಪ್ಪದ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಸ್ಥಳೀಯ ಮರುಳ ಸಿದ್ಧೇಶ್ವರ ಮಠದ ಕೃಪಾನಂದ ಸ್ವಾಮಿಗಳು, ವೇ.ಮೂ. ಶ್ರೀಕಾಂತ ವಿರಕ್ರಮಠ ವಹಿಸಿದ್ದರು.
ವೇದಿಕೆಯಲ್ಲಿ ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ, ಬಿಡಿಸಿಸಿ ಬ್ಯಾಂಕ್ ಪ್ರಭಾರ ಅಧ್ಯಕ್ಷ ಸುಭಾಸ ಢವಳೇಶ್ವರ, ಪ್ರದೇಶ ಕುರುಬರ ಸಂಘದ ನಿರ್ದೆಶಕ ರಾಜೇಂದ್ರ ಸಣ್ಣಕ್ಕಿ, ಪ್ರಭಾ ಶುಗರ್ ಉಪಾಧ್ಯಕ್ಷ ರಾಮಣ್ಣ ಮಹಾರೆಡ್ಡಿ, ನಿರ್ದೆಶಕ ಕೆಂಚನಗೌಡ ಪಾಟೀಲ, ಜಿಲ್ಲಾ ಹಾಲು ಒಕ್ಕೂಟದ ನಿರ್ದೆಶಕ ಮಲ್ಲು ಪಾಟೀಲ, ಜಿಲ್ಲಾ ಸಹಕಾರ ಯುನಿಯನ್ ಅಧ್ಯಕ್ಷ ಬಿ.ಡಿ.ಪಾಟೀಲ, ಎಂ. ಎಂ. ಪಾಟೀಲ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಭಾಸ ಪಾಟೀಲ, ರವೀಂದ್ರ ಪರುಶೆಟ್ಟಿ, ಶಿವಾನಂದ ಲೋಕನ್ನವರ, ಬಸನಗೌಡ ಪಾಟೀಲ, ಪರಮೇಶ್ವರ ಹೊಸಮನಿ, ಸುಭಾಸ ಕುರಬೇಟ, ಮಹಾದೇವ ಶೆಕ್ಕಿ, ಸುಭಾಸ ಕೌಜಲಗಿ, ನೀಲಪ್ಪ ಕೇವಟಿ, ಮಹಾಂತಪ್ಪ ಶಿವನಮಾರಿ, ಮಹೇಶ ಪಟ್ಟಣಶೆಟ್ಟಿ, ಅಶೋಕ ಶಿವಾಪೂರ, ಬಸಪ್ಪ ದಾನನ್ನವರ, ಈರಪಣ್ಣ ಬಿಸಗುಪ್ಪಿ, ಕರೆಪ್ಪ ಬಿಸಗುಪ್ಪಿ, ಶ್ರೀಶೈಲ ಗಾಣಿಗೇರ, ಸುತ್ತಮುತ್ತಲಿನ ಅನೇಕ ಮುಖಂಡರು, ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.


Spread the love

About Fast9 News

Check Also

ಬೆಳೆಸಿ ಜನರನ್ನುಸಂಘಟನೆ ಬೆಳೆಸಿದರೆ ಮಾತ್ರ ಡಾ: ಅಂಬೇಡ್ಕರ ಕನಸು ನನಸಾಗುತ್ತದೆ.: ರವೀಂದ್ರ ಗದಾಡೆ

Spread the loveಸಂಘಟನೆ ಬೆಳೆಸಿ ಜನರನ್ನು ಬೆಳೆಸಿದರೆ ಮಾತ್ರ ಡಾ: ಅಂಬೇಡ್ಕರ ಕನಸು ನನಸಾಗುತ್ತದೆ.: ರವೀಂದ್ರ ಗದಾಡೆ ಸಂಘಟನೆಗಳ ಹೆಸರು …

Leave a Reply

Your email address will not be published. Required fields are marked *