Breaking News

ಬಿಜೆಪಿಗೆ ಸ್ವಲ್ಪ ಮಟ್ಟಿಗೆ ಡ್ಯಾಮೇಜ್ ಆಗುತ್ತಿರುವುದು ನಿಜ: cm ಬೊಮ್ಮಾಯಿ

Spread the love

ಬಿಜೆಪಿಗೆ ಸ್ವಲ್ಪ ಮಟ್ಟಿಗೆ ಡ್ಯಾಮೇಜ್ ಆಗುತ್ತಿರುವುದು ನಿಜ: cm ಬೊಮ್ಮಾಯಿ

ರಾಯಚೂರು: ಟಿಕೆಟ್ ಕೈ ತಪ್ಪಿದ್ದರಿಂದ ಕೆಲ ನಾಯಕರು ಪಕ್ಷ ತೊರೆದಿರುವುದು ಬಿಜೆಪಿಗೆ ಸ್ವಲ್ಪ ಮಟ್ಟಿಗೆ ಡ್ಯಾಮೇಜ್ ಆಗುತ್ತಿರುವುದು ನಿಜ. ನಾಮಪತ್ರ ಸಲ್ಲಿಕೆ ಅವಧಿಯೊಳಗೆ ಈ ಡ್ಯಾಮೇಜ್ ಕಂಟ್ರೋಲ್ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದರು.

ನಗರದಲ್ಲಿ ರವಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು,ಕಾಂಗ್ರೆಸ್ ನಲ್ಲಿ ಜಡತ್ವ ಇದೆ. ಕಾಂಗ್ರೆಸ್ ನಾಯಕರಿಲ್ಲದೆ ಖಾಲಿಯಾಗಿತ್ತು. ಈಗ ಬಿಜೆಪಿ ನಾಯಕರನ್ನು ಸೇರಿಸಿಕೊಂಡು ಪಕ್ಷ ಭರ್ತಿಯಾಗುತ್ತಿದೆ. ಎಂದು ಲೇವಡಿ ಮಾಡಿದರು.

ಬಿಜೆಪಿ ನಿಯಮದ ಪ್ರಕಾರ ಹಿರಿಯ ನಾಯಕರಿಗೆ ಟಿಕೆಟ್ ತಪ್ಪಿದೆ. ಆದರೆ, ಅವರಿಗೆ ಬೇರೆ ಉನ್ನತ ಹುದ್ದೆಗಳನ್ನು ನೀಡುವ ಭರವಸೆ ನೀಡಲಾಗಿತ್ತು. ಆದರೂ ಕೆಲ ನಾಯಕರು ಪಕ್ಷ ತೊರೆದಿದ್ದಾರೆ. ಇದರಿಂದ ಬಿಜೆಪಿ ಗೆಲುವಿಗೆ ತೊಡಕಾಗುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ಬಲಿಷ್ಠವಾಗಿದೆ ಪಕ್ಷದಲ್ಲಿ ಇನ್ನೂ ಸಾಕಷ್ಟು ಲಿಂಗಾಯತ ಸಮುದಾಯದ ನಾಯಕರಿದ್ದಾರೆ.


Spread the love

About Fast9 News

Check Also

ತಾಕತ್ತಿದ್ದರೆ RSS & ಬಜರಂಗದಳ ನಿಷೇಧಿಸಲಿ: ಮಾಜಿ cm ಬೊಮ್ಮಾಯಿ

Spread the loveತಾಕತ್ತಿದ್ದರೆ RSS & ಬಜರಂಗದಳ ನಿಷೇಧಿಸಲಿ: ಮಾಜಿ cm ಬೊಮ್ಮಾಯಿ ಸಂಘ ಪರಿವಾರದ ಸಂಘಟನೆಗಳನ್ನು ನಿಷೇಧ ಮಾಡುವ …

Leave a Reply

Your email address will not be published. Required fields are marked *