Breaking News

ಇನ್ಸುರೇನ್ಸ್ ಕ್ಲೇಮಗಾಗಿ ಕಳ್ಳತನದ ದೂರು ನೀಡಿದ್ದವ ಕಂಬಿ ಹಿಂದೆ,,,,,

Spread the love

ಇನ್ಸುರೇನ್ಸ್ ಕ್ಲೇಮಗಾಗಿ ಕಳ್ಳತನದ ದೂರು ನೀಡಿದ್ದವ ಕಂಬಿ ಹಿಂದೆ,,,,,

ಗೋಕಾಕ: ತಂದೆ ಮತ್ತು ಮಗ ಸೇರಿ ಟ್ಯಾಕ್ಟರ್ ಟ್ರೆಲರ್ ಬಚ್ಚಿಟ್ಟು ಟ್ರೇಲರ್ ಕಳ್ಳತನವಾಗಿದೆ ಎಂದು ಸುಳ್ಳು ದೂರು ನೀಡಿದ್ದ ತಂದೆ ಪರಾರಿಯಾಗಿದ್ದು ಮಗ ಪೋಲಿಸರ ಅತಿಥಿಯಾಗಿದ್ದಾರೆ.

ಬಂಧಿತರಾದ ಶಿವಾಜಿ ರಾಯಪ್ಪ ಯರಗಟ್ಟಿ ಮತ್ತು ಆತನ ಮಗ ಸಂಭಾಜಿ ಯರಗಟ್ಟಿ ಮೂಲತಃ ರಾಜಾಪೂರ ಗ್ರಾಮದವರು ಸದ್ಯ ಹಿರೇನಂದಿ ಗ್ರಾಮದಲ್ಲಿ ವಾಸವಾಗಿದ್ದು, ತಮ್ಮ ನಾಲ್ಕು ಲಕ್ಷ ರೂಪಾಯಿ ಬೆಲೆಬಾಳುವ ಎರಡು ಟ್ರ್ಯಾಕ್ಟರ್ ಟ್ರೇಲರಗಳು ತಮ್ಮ ಹಿರೇನಂದಿ ಗ್ರಾಮದ ಮನೆಯ ಮುಂದೆ ನಿಲ್ಲಿಸಿದ ಸಂದರ್ಭದಲ್ಲಿ ದಿ.9/07/2022 ರಂದು ರಾತ್ರಿ ಕಳ್ಳತನವಾಗಿವೆ ಎಂದು ಗೋಕಾಕ ಗ್ರಾಮೀಣ ಪೋಲಿಸ್ ಠಾಣೆಗೆ ದೂರು ನೀಡಿದ್ದು, ಪೋಲಿಸರು ಅಪರಾಧ ಸಂಖ್ಯೆ 109/2022, ಕಲಂ 379 ಐಪಿಸಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಸಂದರ್ಭದಲ್ಲಿ ಆರೋಪಿ ಸಂಭಾಜಿ ಯರಗಟ್ಟಿಯನ್ನು ತನಿಖೆಗೆ ಒಳಪಡಿಸಿದಾಗ ಇನ್ಸುರೇನ್ಸ್ ಕ್ಲೇಮ್ ಮಾಡಲು ಟ್ರ್ಯಾಕ್ಟರ್ ಟ್ರೇಲರಗಳನ್ನು ನಾನು ನನ್ನ ತಂದೆ ಸೇರಿ ಬಚ್ಚಿಟ್ಟು, ಪೋಲಿಸರಿಗೆ ದೂರು ನೀಡಿರುವದಾಗಿ ಒಪ್ಪಿಕೊಂಡಿದ್ದಾನೆ.

ತಾವಲಗೇರೆ ಗ್ರಾಮದ ನಿರ್ಜನ ಪ್ರದೇಶದಲ್ಲಿ ಈ ಟ್ರೇಲರಗಳನ್ನು ಬಚ್ಚಿಟ್ಟಿದ್ದು, ಸ್ಥಳ ಪರಿಶೀಲನೆ ನಡೆಸಿ, ಆರೋಪಿತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ತಂದೆಯ ಬಂಧನಕ್ಕೆ ಪೋಲಿಸರು ಬಲೆ ಬೀಸಿದ್ದಾರೆ. ಈ ಕುರಿತು ಗೋಕಾಕ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Fast9 News

Check Also

ಕೊಣ್ಣೂರ ಚೆಕ್‌ ಪೊಸ್ಟಿಗೆ ತಹಸಿಲ್ದಾರ ದಿಢೀರ ಬೇಟಿ,ಪರಿಶೀಲನೆ.

Spread the loveಕೊಣ್ಣೂರ ಚೆಕ್‌ ಪೊಸ್ಟಿಗೆ ತಹಸಿಲ್ದಾರ ದಿಢೀರ ಬೇಟಿ,ಪರಿಶೀಲನೆ. ಗೋಕಾಕ : ಬೆಳಗಾವಿ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯ ಕೊಣ್ಣೂರ …

Leave a Reply

Your email address will not be published. Required fields are marked *