Breaking News

ಎಲೆಕ್ಷನನಲ್ಲಿ ಗೆದ್ದಿದ್ದಕ್ಕೆ ವಿರೋಧಿ ಬಣದಿಂದ ಮುಖಂಡನ ಬರ್ಬರ ಹತ್ಯೆ

Spread the love

ಎಲೆಕ್ಷನನಲ್ಲಿ ಗೆದ್ದಿದ್ದಕ್ಕೆ ವಿರೋಧಿ ಬಣದಿಂದ ಮುಖಂಡನ ಬರ್ಬರ ಹತ್ಯೆ

ನಿನ್ನೆ ಗ್ರಾಮ ಪಂಚಾಯ್ತಿ ಚುನಾವಣೆ ಫಲಿತಾಂಶದಲ್ಲಿ ಸ್ಥಳಿಯ ಮುಖಂಡನ ಪೇನಲ್‍ನಲ್ಲಿ 10ಕ್ಕೆ 10 ಸೀಟ್‍ಗಳು ಬಂದಿದ್ದು. ಆದ್ರೆ ಇದೇ ಹೊಟ್ಟೆ ಕಿಚ್ಚಿನಿಂದ ವಿರೋಧಿ ಬಣದವರು ಆ ಮುಖಂಡನನ್ನೆ ಮರ್ಡರ್ ಮಾಡಿರುವ ಒಂದು ಧಾರುಣ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸುಲ್ತಾನ್‍ಪುರ ಗ್ರಾಮದಲ್ಲಿ ನಡೆದಿದೆ.

ಶಾನುರಸಾಬ್ ದಸ್ತಗೀರ್‍ಸಾಬ್ ಮುಲ್ಲಾ ಕೊಲೆಯಾಗಿರುವ ದುರ್ದೈವಿ. ಸುಲ್ತಾನ್‍ಪುರ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಎರಡು ಬಣಗಳ ನಡುವೆ ನೇರಾನೇರ ಹಣಾಹಣಿ ಏರ್ಪಟ್ಟಿತ್ತು. ನಿನ್ನೆಯಷ್ಟೇ ಫಲಿತಾಂಶ ಹೊರ ಬಿದ್ದಾಗ ಶಾನುರಸಾಬ್ ಮುಲ್ಲಾ ಪೇನಲ್‍ನ 10ಕ್ಕೆ 10 ಅಭ್ಯರ್ಥಿಗಳು ಭರ್ಜರಿ ಜಯ ದಾಖಲಿಸುವ ಮೂಲಕ ಪಂಚಾಯ್ತಿ ಗದ್ದುಗೆಯನ್ನು ಹಿಡಿಯಲು ಯಶಸ್ವಿಯಾಗಿದ್ದರು.
ಈ ಸೋಲಿನಿಂದ ಕಂಗಾಲಾಗಿದ್ದ ವಿರೋಧ ಬಣದವರು ಬುಧವಾರ ರಾತ್ರಿ ಶಾನುರಸಾಬ್ ಮುಲ್ಲಾ ಮನೆ ಮೇಲೆ ದಾಳಿ ಮಾಡಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು.

ಬಳಿಕ ತೀವ್ರವಾಗಿ ಗಾಯಗೊಂಡಿದ್ದ ಶಾನುರಸಾಬ್‍ನನ್ನು ಬೆಳಗಾವಿ ವಿಜಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಬೆಳಿಗ್ಗೆ ಶಾನುಸಾಬ್ ಕೊನೆಯುಸಿರೆಳೆದಿದ್ದಾನೆ. ಘಟನೆ ಕುರಿತು ಕೊಲೆಯಾದ ವ್ಯಕ್ತಿಯ ಪುತ್ರ ಮಲಿಕ್‍ಜಾನ್ ಮುಲ್ಲಾ ಮಾತನಾಡಿ ನಮ್ಮ ಗೆಲುವನ್ನು ಸಹಿಸಿಕೊಳ್ಳಲು ಆಗದೇ ನಮ್ಮ ತಂದೆಯನ್ನೆ ಕೊಲೆ ಮಾಡಿದ್ದಾರೆ ಎಂದು ಕಣ್ಣೀರು ಹಾಕಿದ್ದಾನೆ.

15 ಜನರು ಸೇರಿ ಮೋಸದಿಂದ ನಮ್ಮ ಅಣ್ಣನನ್ನು ಹೊಡೆದು ಕೊಂದು ಬಿಟ್ಟಿದ್ದಾರೆ ಎಂದು ಕೊಲೆಯಾದ ಶಾನೂರ್‍ಸಾಬ್ ಸಹೋದದರು ಕಣ್ಣೀರು ಹಾಕಿದರು.


Spread the love

About fast9admin

Check Also

ಎನ್ಡಿಡಿಬಿ ಚೇರಮನ್ ಡಾ. ಮೀನೇಶ್ ಭಾಯಿ ಷಾ ಅವರಿಗೆ ಗೌರವ ಸಮರ್ಪಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ*

Spread the love*ಎನ್ಡಿಡಿಬಿ ಚೇರಮನ್ ಡಾ. ಮೀನೇಶ್ ಭಾಯಿ ಷಾ ಅವರಿಗೆ ಗೌರವ ಸಮರ್ಪಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ* *ಗುಜರಾತ್ …

Leave a Reply

Your email address will not be published. Required fields are marked *