Breaking News

ರಕ್ಷಣೆಗೂ ಸೈ, ಆಟಕ್ಕೂ ಸೈ,,ಕ್ರಿಕೇಟ್ ಕಪ್ ತಮ್ಮದಾಗಿಸಿಕೊಂಡ ಪೋಲಿಸ್ ತಂಡ.

Spread the love

ರಕ್ಷಣೆಗೂ ಸೈ, ಆಟಕ್ಕೂ ಸೈ,,ಕ್ರಿಕೇಟ್ ಕಪ್ ತಮ್ಮದಾಗಿಸಿಕೊಂಡ ಪೋಲಿಸ್ ತಂಡ.

ಗೋಕಾಕ :ಪೋಲಿಸರು ರಕ್ಷಣೆಗೂ ಸೈ,ಕ್ರೀಡೆಯಲ್ಲಿ ಬಾಗವಹಿಸಿ ಟ್ರೋಫಿ ಗೆಲ್ಲಲು ಸೈ,ಎನ್ನುವದನ್ನ 3 ದಿನದಿಂದ ಗೋಕಾಕದಲ್ಲಿ‌ ನಡೆದ ನಗರದ ಮಾರ್ನಿಂಗ್ ಸ್ಟಾರ್ ಸಹಯೋಗದಲ್ಲಿ, ಗೋಕಾಕ ಮತ್ತು ಮೂಡಲಗಿ ತಾಲೂಕಿನ ವಿವಿಧ ಇಲಾಖೆಗಳ ಸರಕಾರಿ ನೌಕರರ ಸ್ನೇಹ ಪೂರ್ವ ಕ್ರಿಕೆಟ್ ಪಂದ್ಯಾವಳಿ ಗೋಕಾಕದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಜರುಗಿದ ಕ್ರಿಕೇಟ್ ಪೈನಲನಲ್ಲಿ ಟ್ರಾಫಿ ಗೆದ್ದು ಸಾಬೀತು ಪಡಿಸಿದ್ದಾರೆ.

ಒಟ್ಟು16 ತಂಡಗಳು ಈ 3 ದಿನದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು. ಅರಣ್ಯ ಇಲಾಖೆ ಹಾಗೂ ಪೊಲೀಸ್ ತಂಡಗಳ ನಡುವೆ ನಡೆದ ಫೈನಲ್ ಪಂದ್ಯದ ರೋಚಕ ಹಣಾಹಣಿಯಲ್ಲಿ ಪೊಲೀಸ್ ತಂಡ ಜಯಗಳಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಪಂದ್ಯದ ಬಳಿಕ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೋಳಿ ಮತ್ತು ಕೆ,ಎಮ್,ಎಫ್, ನಿರ್ದೇಶಕ ಅಮರನಾಥ ಜಾರಕಿಹೋಳಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಿ ಶುಭ ಕೊರಿದರು.ಈ ಸಂದರ್ಭದಲ್ಲಿ ಗೋಕಾಕ ತಹಸಿಲ್ದಾರ ಮೊಹನ ಬಸ್ಮೆ.ಸಿಪಿಐ ಶ್ರೀಶೈಲ ಬ್ಯಾಕೂಡ, ಪಿಎಸ್ಐ ಕೆ,ವಾಲಿಕಾರ,ಕ್ಷೇತ್ರ ಶಿಕ್ಷಣಾಧಿಕಾರಿ ಜಿ,ಬಿ,ಬಳಿಗಾರ, ಹಾಗೂ ಕ್ರೀಡಾ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ಇನ್ನೂಳಿದ ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದು ನೂರಾರು ಪ್ರೇಕ್ಷಕರು ಪೈನಲ್ ಪಂದ್ಯವನ್ನು ಉತ್ಸಾಹದಿಂದ ವೀಕ್ಷಿಸಿದರು.


Spread the love

About Fast9 News

Check Also

ಕಪರಟ್ಟಿ ಕಳ್ಳಿಗುದ್ದಿ ಶ್ರೀ ಗುರು ಮಹಾದೇವ ಆಶ್ರಮದ ಬಸವರಾಜ ಶ್ರೀಗಳಿಗೆ ಬ್ರಹ್ಮಶ್ರೀ ಪ್ರಶಸ್ತಿ

Spread the loveಕಪರಟ್ಟಿ ಕಳ್ಳಿಗುದ್ದಿ ಶ್ರೀ ಗುರು ಮಹಾದೇವ ಆಶ್ರಮದ ಬಸವರಾಜ ಶ್ರೀಗಳಿಗೆ ಬ್ರಹ್ಮಶ್ರೀ ಪ್ರಶಸ್ತಿ ಹುಕ್ಕೇರಿ ಶ್ರೀ ಗುರುಶಾಂತೇಶ್ವರ …

Leave a Reply

Your email address will not be published. Required fields are marked *