Breaking News

ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆಗೆ ಶರಣು

Spread the love

ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆಗೆ ಶರಣು

2 ಸ್ಟೇಟ್ ಬ್ಯಾಂಕನಲ್ಲಿ ೪೦ ಸಾವಿರ, ಚಿಮ್ಮಡ ಪಿಕೆಪಿಎಸ್ ನಲ್ಲಿ ೫೦ ಸಾವಿರ ಸಾಲ, ಹಾಗೂ ಇತರೆ ಕೈಗಡ ಸಾಲವನ್ನು ಹೊಂದಿ ಬೆಳೆ ಸರಿಯಾಗಿ ಬಾರದೆ ಇದ್ದ ಕಾರಣ ರೈತನೊರ್ವ ಮನನೊಂದು ನೆಣಿಗೆ ಶರಣಾಗಿದ್ದಾನೆ,

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಯರಗಟ್ಟಿ ಗ್ರಾಮದ ರೈತ ವಿಠ್ಠಲ ಮಾಯಪ್ಪ ಮೀಸೆನ್ನವರ(38) ಸಾಲಬಾಧೆ ತಾಳಲಾರದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ರೈತ ವಿಠ್ಠಲ ೨ ಎಕರೆ ಜಮೀನು ಹೊಂದಿದ್ದು, ಬನಹಟ್ಟಿಯ ಸ್ಟೇಟ್ ಬ್ಯಾಂಕನಲ್ಲಿ ೪೦ ಸಾವಿರ, ಚಿಮ್ಮಡ ಪಿಕೆಪಿಎಸ್ ನಲ್ಲಿ ೫೦ ಸಾವಿರ ಸಾಲ, ಹಾಗೂ ಇತರೆ ಕೈಗಡ ಸಾಲವನ್ನು ಹೊಂದಿದ್ದು ಬೆಳೆ ಸರಿಯಾಗಿ ಬಾರದೇ ಇರುವುದು

 

ಮಾಡಿದ ಸಾಲವನ್ನು ಹೇಗೆ ತೀರಿಸುವುದು ಎಂದು ಮನನೊಂದು ತಮ್ಮ ಯರಗಟ್ಟಿಯ ತೋಟದ ಮನೆಯ ಅಡುಗೆ ಕೋಣೆಯಲ್ಲಿ ಹೆಂಡತಿ ಮಕ್ಕಳು ಮಲಗಿ ಕೊಂಡಾಗ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಈ ಕುರಿತು ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ರವಿಕುಮಾರ ಧರ್ಮಟ್ಟಿ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.


Spread the love

About fast9admin

Check Also

ಕೊಣ್ಣೂರ ಚೆಕ್‌ ಪೊಸ್ಟಿಗೆ ತಹಸಿಲ್ದಾರ ದಿಢೀರ ಬೇಟಿ,ಪರಿಶೀಲನೆ.

Spread the loveಕೊಣ್ಣೂರ ಚೆಕ್‌ ಪೊಸ್ಟಿಗೆ ತಹಸಿಲ್ದಾರ ದಿಢೀರ ಬೇಟಿ,ಪರಿಶೀಲನೆ. ಗೋಕಾಕ : ಬೆಳಗಾವಿ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯ ಕೊಣ್ಣೂರ …

Leave a Reply

Your email address will not be published. Required fields are marked *