Breaking News

ಸಮಾನತೆ ದೊರೆಯುವುದಕ್ಕಾಗಿ ವ್ಯಕ್ತಿಗೌರವ, ದೃಢಸಂಕಲ್ಪ ಮಾಡಿ : ಜ್ಞಾನ ಪ್ರಕಾಶ ಸ್ವಾಮಿಜಿ.

Spread the love

ಸಮಾನತೆ
ದೊರೆಯುವುದಕ್ಕಾಗಿ
ವ್ಯಕ್ತಿಗೌರವ,
ದೃಢಸಂಕಲ್ಪ ಮಾಡಿ : ಜ್ಞಾನ ಪ್ರಕಾಶ ಸ್ವಾಮಿಜಿ.

ರಾಯಬಾಗ: ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಿಡಕಲ್ಲ ಗ್ರಾಮದಲ್ಲಿ ದಲಿತ ಸಂಘರ್ಷ ಸಮೀತಿ (ಭೀಮವಾದ) ಸಂಘಟನೆಯಿಂದ ಆಯೋಜಿಸಿದ “ಸಂವಿಧಾನ ರಕ್ಷಿಸಿ, ದೇಶ ರಕ್ಷಿಸಿ” ಬೆಳಗಾವಿ ಜಿಲ್ಲಾ ಮಟ್ಟದ ಸಂವಿಧಾನ ಜಾಗೃತ ಸಮಾವೇಶಕ್ಕೆ ಮೈಸೂರಿನ ಉರಿಲಿಂಗ ಪೆದ್ದಿಮಠ ಶ್ರೀಗಳಾದ ಜ್ಞಾನಪ್ರಕಾಶ ಸ್ವಾಮೀಜಿಯವರು ಸಸಿಗೆ ನೀರು ಹಾಕುವುದರ ಮೂಲಕ ಹಾಗೂ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪವನ್ನು ಹಾಕಿ ಚಾಲನೆ ನೀಡಿದರು.

ನಂತರ ಭಾರತದ ಸಂವಿಧಾನ
ಪೀಠಿಕೆಯ ಪ್ರತಿಜ್ಣಾ ವಿದಿಯಲ್ಲಿ
ಭಾರತದ ಜನತೆಯಾದ ನಾವು,
ಭಾರತವನ್ನು ಸಾರ್ವಭೌಮ, ಸಮಾಜವಾದಿ, ಧರ್ಮನಿರಪೇಕ್ಷ
ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ
ರೂಪಿಸುವುದಕ್ಕಾಗಿ
ಭಾರತದ ಎಲ್ಲಾ ಪ್ರಜೆಗಳಿಗೆ
ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು
ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು
ಉಪಾಸನೆಯ ಸ್ವಾತಂತ್ರ್ಯವನ್ನು
ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಯನ್ನು
ದೊರೆಯುವಂತೆ ಮಾಡುವುದಕ್ಕಾಗಿ
ವ್ಯಕ್ತಿಗೌರವ,
ದೃಢಸಂಕಲ್ಪ ಮಾಡಿ,
ನಮ್ಮ ಸಂವಿಧಾನ ಸಭೆಯಲ್ಲಿ
1949 ನೆಯ ಇಸವಿಯ ನವೆಂಬರ್ ತಿಂಗಳ 26 ನೇ ದಿನದಂದು
ಈ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು
ಅಂಗೀಕರಿಸಿ, ಶಾಸನವಾಗಿ ವಿಧಿಸಿಕೊಂಡಿದ್ದೇವೆ.

ಸಭೆಯಲ್ಲಿ ಸೇರಿದ ನೂರಾರು ದಲಿತ ಸಂಘರ್ಷ ಸಮೀತಿಯ ಕಾರ್ಯಕರ್ತರು ಹಾಗೂ ದಲಿತರು ಹೇಳಿದರು
ಸಂವಿಧಾನ ರಕ್ಷಿಸಿ ದೇಶ ರಕ್ಷಿಸಿ
ಸಂವಿಧಾನ ಜಾಗೃತಿ ಸಮಾವೇಶ ಮತ್ತು ನೂತನ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಸನ್ಮಾನಿಸಿದರು.

ವಿವೇಕರಾವ ವಸಂತರಾವ ಪಾಟೀಲ, ವಿಧಾನ ಪರಿಷತ್ ಸದಸ್ಯರು, ಪರಶುರಾಮ ನೀಲನಾಯಕ, ರಾಜ್ಯ ಸಂಚಾಲಕರು, ಡಿಎಸ್‌ ಎಸ್‌ (ಭೀಮವಾದ) ಬಸು ತಳವಾರ,
ಶ್ರೀಮತಿ ಅಕ್ಷತಾ ಕೆ. ಸಿ., ಪ್ರಧಾನ ಕಾರ್ಯದರ್ಶಿಗಳು, ಲೈಂಗಿಕ ಅಲ್ಪಸಂಖ್ಯಾತರ ಒಕ್ಕೂಟ
ಸಿದ್ದಾರ್ಥ ಆ‌, ಸಿಂಗೆ, ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಕಮೀಟಿ, ಅಥಣಿ.ಶ್ರೀ ಎಂ. ಸಿ. ನಾರಾಯಣ್, ರಾಜ್ಯ ಸಂಘಟನಾ ಸಂಚಾಲಕರು, ಡಿಎಸ್‌ ಎಸ್‌ (ಭೀಮವಾದ)
ವಸಂತರಾವ ಪಾಟೀಲ, ಮಾಜಿ ಜಿ.ಪಂ. ಸದಸ್ಯರು, ಸಂಜೀವ ಕಾಂಬಳೆ, ರಾಜ್ಯ ಸಂಘಟನಾ ಸಂಚಾಲಕರು, ಡಿಎಡ್ ಎಡ್ (ಭೀಮವಾದ ). ಚಿದಾನಂದ ತಳಕೇರಿ, ಜಿಲ್ಲಾ ಸಂಚಾಲಕರು, ಡಿಎಸ್‌ ಎಸ್‌ (ಭೀಮವಾದ) ಬೆಳಗಾವಿ.ಶಂಕರ. ದೂಪಧಾಳ,
ಯಲ್ಲಪ್ಪಾ ಸಿಂಗೆ, ಅಧ್ಯಕ್ಷರು, ಚಿಕ್ಕೋಡಿ ಜಿಲ್ಲಾ ಯುವ ಕಾಂಗ್ರೆಸ್ ಕಮೀಟಿ, ಸುಖದೇವ ಮಾನೆ, ಗುತ್ತಿಗೆದಾರರು.
ಅಪ್ಪಾಸಾಬ ಕುರಣೆ, ರಾಜ್ಯಾಧ್ಯಕ್ಷರು, ಅಖಿಲ ಭಾರತೀಯ ಭ್ರಷ್ಟಾಚಾರ ನಿರ್ಮೂಲನಾ ಮಂಡಳಿ, ದೆಹಲಿ,ಶ್ರೀಮತಿ ಸಂಗೀತಾ ಕಾಂಬಳೆ, ಮುಖಂಡರು, ದಲಿತ ಮಹಿಳಾ ಒಕ್ಕೂಟ. ಶ್ರೀಮತಿ ರೇಖಾ ಬಂಗಾರಿ, ಜಿಲ್ಲಾ ಸಂಚಾಲಕರು, ದಲಿತ ಮಹಿಳಾ ಒಕ್ಕೂಟ . ಆರ್. ಎಸ್. ಹಳ್ಳಾಪಗೋಳ, ನಿವೃತ್ತ ಶಿಕ್ಷಣ ಸಂಯೋಜಕರು, ಹಿಡಕಲ್,
ತಾಲೂಕು ಸಂಚಾಲಕರು. ಕೆಂಪಣ್ಣಾಶಿರಹಟ್ಟಿ, ಹುಕ್ಕೇರಿ,
ಮುತ್ತುರಾಯಣ್ಣವರ, ಚಿಕ್ಕೋಡಿ. ಸಂಜು, ಮೂಡಲಗಿ, ಪಾರಿಸ ಗೋಂಧಳೆ, ಅಥಣಿ,
ವೆಂಕಟೇಶ ಕಾಂಬಳೆ, ಕಾಗವಾಡ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮೀತಿ, ಪದಾಧಿಕಾರಿ ಮತ್ತು ಹಿಡಕಲ್ ಗ್ರಾಮದ ಸಮಸ್ತ ದಲಿತ ಬಾಂಧವರು ಉಪಸ್ಥಿತರಿದ್ದರು.


Spread the love

About fast9admin

Check Also

ಮೋದಿಯವರನ್ನು ಸೋಲಿಸಲು ನಮ್ಮ ವಿರೋಧಿಗಳಿಗೆ ಶತ್ರು ರಾಷ್ಟ್ರಗಳ ಬೆಂಬಲ-* *ಎನ್ಡಿಎ ಅಭ್ಯರ್ಥಿ ಜಗದೀಶ್ ಶೆಟ್ಟರ್*

Spread the love*ಪ್ರಧಾನಿ ಮೋದಿಯವರಿಂದಾಗಿ ಭಾರತಕ್ಕೆ ವಿಶ್ವ ಮನ್ನಣೆ* *ಮೋದಿಯವರನ್ನು ಸೋಲಿಸಲು ನಮ್ಮ ವಿರೋಧಿಗಳಿಗೆ ಶತ್ರು ರಾಷ್ಟ್ರಗಳ ಬೆಂಬಲ-* *ಎನ್ಡಿಎ …

Leave a Reply

Your email address will not be published. Required fields are marked *