Breaking News

ಜೀವ ಲೆಕ್ಕಿಸದೆ ಬಾರಿ ಅನಾಹುತ ತಪ್ಪಿಸಿದ ಡಾ: ಬಿ,ಆರ್, ಅಂಬೇಡ್ಕರ ವಸತಿ ಶಾಲಾ ಸಿಬ್ಬಂದಿಗಳು

Spread the love

ಜೀವ ಲೆಕ್ಕಿಸದೆ ಬಾರಿ ಅನಾಹುತ ತಪ್ಪಿಸಿದ ಡಾ: ಬಿ,ಆರ್, ಅಂಬೇಡ್ಕರ ವಸತಿ ಶಾಲಾ ಸಿಬ್ಬಂದಿಗಳು

ಶಾಲಾ ಸಿಬ್ಬಂದಿಗಳ ಚಾಣಾಕ್ಷತನದಿಂದ ಇವತ್ತು ಆಗಬೇಕಾದ ಬಾರಿ ಅನಹುತ ತಪ್ಪಿದೆ,ಗೋಕಾಕ ನಗರದಲ್ಲಿರುವ ಗೋಡಚಿನಮಲ್ಕಿಯ ಡಾ: ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಆಕಸ್ಮಿಕವಾಗಿ ಬಿಸಿಯೂಟ ಅಡುಗೆ ಕೋಣೆಯಲ್ಲಿ ಅಡುಗೆ ಮಾಡುತ್ತಿರುವಾಗ ಸಿಲೆಂಡರಗೆ ಜೊಡಿಸಿದ ಪೈಪ್ ಕಾದು ಲೀಕ್ ಆದ ಪರಿಣಾಮ ಸ್ಫೋಟದ ಭಾರಿ ಶಬ್ದ ಕೇಳಿ ಬಂದಾಗ ಅಡುಗೆಯವರು ಹೆದರಿ

ಕೋಣೆಯಿಂದ ಹೊರಗೆ ಬರುವದನ್ನು ನೋಡಿ ವಿದ್ಯಾರ್ಥಿಗಳಿಗೆ ಭೊದನೆ ಮಾಡುತ್ತಿರುವ ಶಾಲಾ ಸಿಬ್ಬಂದಿಗಳು ಜೀವ ಲೆಕ್ಕಿಸದೆ ಕೋಣೆಯೊಳಗೆ ನುಗ್ಗಿ ಹತ್ತಿದ ಬೆಂಕಿಯನ್ನು ನಿಂದಿಸುವಲ್ಲಿ ಯಶಸ್ವಿಯಾದರು.ಕೋಣೆಯ ತುಂಬಾ ಬೆಂಕಿ ಆವರಿಸಿದ್ದ ಕಾರಣ ಎಷ್ಟೆ ಪ್ರಯತ್ನ ಪಟ್ಟರು ಬಾಗಿಲ ಜೊತೆಯಲ್ಲಿ ಒಳಗೆ ಇರುವ ಬಿಸಿಯೂಟ ಸಾಮಗ್ರಿಗಳು ಆಹಾರ ಧಾನ್ಯ ಸ್ವಲ್ಪ ಮಟ್ಟಿಗೆ ಸುಟ್ಟು ಕರಕಲಾಗಿವೆ.

ತಕ್ಷಣ ಸುದ್ದಿ ತಿಳಿದ ಅಗ್ನಿ ಶ್ಯಾಮಕ ದಳದವರು ಸ್ಥಳಕ್ಕೆ ಆಗಮಿಸಿ ಘಟನೆಯ ಮಾಹಿತಿ ಪಡೆದು ಹೋಗಿದ್ದಾರೆ,ಯಾವುದೆ ಅನಾಹುತ ಸಂಬವಿಸಿಲ್ಲ ಎಂದು ಮುಖ್ಯ ಗುರುಗಳಾದ ವಿಠಲ ಗುಡೇನ್ನವರ ತಿಳಿಸಿದ್ದಾರೆ.

ಇನ್ನು ಬಾರಿ ಅನಾಹುತ ತಪ್ಪಿಸಿದ ಸಿಬ್ಬಂದಿಗಳ ಕಾರ್ಯಕ್ಕೆ ಸ್ಥಳಿಯರು ಶ್ಲಾಘನೀಯ ವ್ಯಕ್ತಪಡಿಸಿದ್ದಾರೆ.


Spread the love

About Fast9 News

Check Also

ಕೊಣ್ಣೂರ ಚೆಕ್‌ ಪೊಸ್ಟಿಗೆ ತಹಸಿಲ್ದಾರ ದಿಢೀರ ಬೇಟಿ,ಪರಿಶೀಲನೆ.

Spread the loveಕೊಣ್ಣೂರ ಚೆಕ್‌ ಪೊಸ್ಟಿಗೆ ತಹಸಿಲ್ದಾರ ದಿಢೀರ ಬೇಟಿ,ಪರಿಶೀಲನೆ. ಗೋಕಾಕ : ಬೆಳಗಾವಿ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯ ಕೊಣ್ಣೂರ …

Leave a Reply

Your email address will not be published. Required fields are marked *