Breaking News

Spread the love

*ವೀಕೆಂಡ್ ಕರ್ಪ್ಯೂ,ರಸ್ತೆಗಿಳಿದ ಗ್ರಾಮೀಣ ಪಿಎಸ್ಐ, ನಾಗರಾಜ :ಬಂದ ದಾರಿಗೆ ವಾಪಸ್ಸಾಗುತ್ತಿರುವ ವಾಹನಗಳು*

ರಾಜ್ಯದಲ್ಲಿ 3 ನೆ ಅಲೆ ಬೀತಿ ಹೆಚ್ಚಾಗುತ್ತಿರುವ ಕಾರಣ ಕೋವಿಡ್-19 ಪ್ರಕರಣಗಳನ್ನ ತಡೆಯಲು ನಿನ್ನೆ ರಾತ್ರಿಯಿಂದ ರಾಜ್ಯ ಸರಕಾರ ಕರ್ಫ್ಯೂ ಜಾರಿ ಮಾಡಿದ್ದರು ಸಹ ಜನರು ಬೇಕಾ ಬಿಟ್ಟಿಯಾಗಿ ವಾಹನಗಳಲ್ಲಿ ತಿರುಗಾಡುತಿದ್ದಾರೆ,

ಅಂತವರಿಗೆ ಗೋಕಾಕ ಗ್ರಾಮೀಣ ಪಿ,ಎಸ್,ಐ, ನಾಗರಾಜ ಖಿಲಾರೆಯವರು ನಿಯಮ ಉಲ್ಲಂಘಿಸಿ ಬೇಕಾ ಬಿಟ್ಟಿ ವಾಹನಗಳಲ್ಲಿ ತಿರುಗಾಡುತಿದ್ದವರಿಗೆ ಬಿಸಿ ಮುಟ್ಟಿಸಿದ್ದಾರೆ.

ಗೋಕಾಕ ತಾಲೂಕಿನ ಕೊಣ್ಣೂರ ಮುಖ್ಯ ರಸ್ತೆ ಮಾರ್ಗವಾಗಿ ಹೊರ ರಾಜ್ಯದಿಂದ ಬರುವಂತಹ ಮತ್ತು ಬೇಕಾಬಿಟ್ಟಿಯಾಗಿ ವಾಹನಗಳಲ್ಲಿ ಸಂಚಾರಿಸುತ್ತಿರುವ ವಾಹನಗಳನ್ನು ಮತ್ತು ಜನರನ್ನು ತಡೆದು ಮಾಸ್ಕ್ ಹಾಕದೆ ಇರುವಂತವರನ್ನು ಮತ್ತು ಬೇಕಾ ಬಿಟ್ಟಿ ತಿರುಗಾಡುತಿದ್ದ ವಾಹನಗಳನ್ನು ತಡೆದು ಪರಿಶಿಲಿಸಿ ವಾಹನಗಳನ್ನು ಬಂದ ಕಡೆಗೆ ವಾಪಸ ಕಳಿಸಿದರು.

ಈ ಸಂದರ್ಭದಲ್ಲಿ ಎ,ಎಸ್,ಐ, ಎಸ್,ಕೆ,ಪಾಟೀಲ, ಹೆಡ್ ಕಾನ್ಸ್‌ಟೇಬಲ ಸಂಜು ಹಡಗಿನಾಳ,ಸಿಬ್ಬಂದಿಗಳಾದ ಮುತ್ತೆಪ್ಪಾ ಸೊಲಾಪುರೆ,ಎಸ್,ಬಿ,ತೊರಗಲ್,ವೆಂಕಪ್ಪ ಪೂಜೇರಿ ಉಪಸ್ಥಿತರಿದ್ದರು.


Spread the love

About Fast9 News

Check Also

ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬವನ್ನು ಸೌಹಾರ್ದತೆಯಿಂದ ಆಚರಿಸಲು ಪೋಲಿಸರಿಂದ ಪಥಸಂಚಲನ

Spread the loveಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬವನ್ನು ಸೌಹಾರ್ದತೆಯಿಂದ ಆಚರಿಸಲು ಪೋಲಿಸರಿಂದ ಪಥಸಂಚಲನ ಗೋಕಾಕ : ಗಣೇಶ …

Leave a Reply

Your email address will not be published. Required fields are marked *