Breaking News

ಚಾಲಕರಿಗಾಗಿ ಕಾರ್ಮಿಕ ಇಲಾಖೆಯ ಸೌಲಬ್ಯ ಸದುಪಯೋಗ ಮಾಡಿಕೊಳ್ಳಿ : ಮಾವರಕರ

Spread the love

ಚಾಲಕರಿಗಾಗಿ ಕಾರ್ಮಿಕ ಇಲಾಖೆಯ ಸೌಲಬ್ಯ ಸದುಪಯೋಗ ಮಾಡಿಕೊಳ್ಳಿ : ಮಾವರಕರ

ರಾಯಬಾಗ : ನಮ್ಮ ಅಮೂಲ್ಯವಾದ ಜೀವನವನ್ನು ರಸ್ತೆ ಅಪಘಾತದಲ್ಲಿ ನಾವುಗಳು ನೀಡುತ್ತಿದ್ದೆವೆ ಹೀಗಾಗಿ ಎಲ್ಲಾ ಚಾಲಕರು ಕಡ್ಡಾಯವಾಗಿ ಚಾಲನಾ ಪರಮಾಣಪತ್ರ ಪಡೆದುಕೊಳ್ಳಬೇಕು. ಹಾಗೆ ವಾಹನ್ ಇನ್ಸೂರೇನ್ಸ್ ಮಾಡಿಸಿಕೊಳ್ಳುವುದರಿಂದ ನಂಬಿದ ಕುಟುಂಬಕ್ಕೆ ನಾವುಗಳು ಅನ್ಯಾಯ ಮಾಡದೇ ಅವರುಗಳಿಗೆ ಸಹಾಯ ಮಾಡಿದತ್ತಾಗುತ್ತದೆ ಎಂದು ಭೀಮನಗೌಡಾ ಪಾಟೀಲ ಹೇಳಿದರು.

ಬೆಳಗಾವಿ ಜಿಲ್ಲೆ ರಾಯಬಾಗ ಪಟ್ಟಣದ ಶ್ರೀ ಮಹಾದೇವ ಮಂಗಳ ಕಾರ್ಯಾಲಯದಲ್ಲಿ ಎಲ್ಲ ವಾಣಿಜ್ಯ ಬಳಕೆಯ ಚಾಲಕರಿಗಾಗಿ ಅರಿವು ಮೂಡಿಸುವ ಸರ್ವ ಸದಸ್ಯರ ಸಭೆಯಲ್ಲಿ ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮದ ಡಾ. ಅಭಿನವ ಬ್ರಹ್ಮಾನಂದ ಮಹಾಸ್ವಾಮಿಗಳು ಹಾಗೂ ಚಾಲಕ ಟ್ರೇಡ್ ಯೂನಿಯನ್ ರಾಜ್ಯಾಧ್ಯಕ್ಷ ಸೋಮಶೇಖರ್. ಕೆ ಹಾಗೂ ಚಿಕ್ಕೋಡಿ ಸಾರಿಗೆ ಪ್ರಾದೇಶಿಕ ಇಲಾಖೆಯ ಅಧಿಕಾರಿಗಳು
ಉದ್ಘಾಟನೆ ನೆರವೆರಿಸಿ ಮಾತನಾಡುತ್ತಾ
ಚಾಲಕರು ನಿಮ್ಮ ಪ್ರಯಾಣಕರಿಗೆ ಸುರಕ್ಷೀತ ಪ್ರಯಾಣದ ವ್ಯವಸ್ಢೆ ಬಗ್ಗೆ ಕಾಳಜಿ ವಹಿಸಿದರೆ ಮಾತ್ರ ತಾವುಗಳು ಚಾಲಕರಾಗಿದಕ್ಕೆ ಸ್ವಾರ್ಥಕವಾಗುತ್ತದೆ ಎಂದು
ಭೀಮನಗೌಡಾ ಪಾಟೀಲ ಹೇಳಿದರು.

ಚಾಲಕರಿಂದ ಚಾಲಕರಿಕ್ಕೆ ನೇರವುಯಾಗುವುದಕ್ಕರ ಚಾಲಕರು ಸ್ವಲ್ಪ ಮಟ್ಟಿಗೆ ನೀದಿ ಸಗ್ರಹ ಮಾಡಿ ಚಾಲಕರ ಕುಟುಂಬಕ್ಕೆ ತೊಂದರೆ ಬಂದ ವೇಳೆಯಲ್ಲಿ ನೀದಿಯನ್ನು ಅವರುಗಳಿಗೆ ಉಪಯೋಗವನ್ನು ಮಾಡಿಕೊಳ್ಳಬೇಕು. ಮತ್ತು ಚಾಲಕರಿಗೆ ಮುಖ್ಯವಾಗಿ ತಾಳ್ಮೆ ಸಹನೆಯಿಂದ ಚಾಲಕರು ಭಾವನೆ ಬೆಳೆಸಿಕೊಳ್ಳಬೇಕೆಂದು ಉಪತಹಶೀಲ್ದಾರ ಪಿ ಎಸ್ ಮಂಗಸೂಳಿ ಕರೆ ನೀಡಿದರು.

ಅಟಲ್ ಪಿಂಚನಿ ಯೋಜನೆಯ ಚಾಲಕರು ಸದುಪಯೋಗ ಪಡೆದುಕೊಂಡು ಕೆನರಾ ಬ್ಯಾಂಕ್ ವ್ಯವಸ್ಥಾಪಕರಾದ ಹಣಮಂತ ನಾಯಿಕ ಚಾಲಕರಿಗೆ ಹೇಳಿದರು.

ಕಾರ್ಮಿಕ‌ ಇಲಾಖೆಯಿಂದ ಚಾಲಕರಿಗೆ ಹತ್ತು ಹಲವಾರು ಯೋಜನೆಗಳಿರುವ ಉಪಯೋಗಗಳ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ಕಾರ್ಮಿಕ ಇಲಾಖೆಯ ನಿರೀಕ್ಷಕರಾದ ಪಾಂಡುರಂಗ ಮಾವರಕರ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮ ಚಾಲಕರ ಟ್ರೇಡ್ ಯೂನಿಯನ್ ರಾಜ್ಯಾಧ್ಯಕ್ಷ ಸೋಮಶೇಖರ್ ಕೆ ವಹಿಸಿ ಮಾತನಾಡುತ್ತಾ ಅವರು ಚಾಲಕರಲ್ಲಿ ಒಗ್ಗಟ್ಟು ಇಲ್ಲದ ಕಾರಣ ಹಿಂದೂಳಿದಿದ್ದಾರೆ. ಚಾಲಕರು ಮಧ್ಯ ಸೇವನೆಯಿಂದ ಚಾಲಕರಿಗೆ ಸ್ವಲ್ಪ ಗೌರವ ಕಡಿಮೆಯಾಗುತ್ತಿದೆ. ಚಾಲಕರಿಗೆ ಅನ್ಯಾಯವಾದ್ದಾಗ ಸಂಘಟನೆಯಾಗಿ ಕೂಡಿಕೊಂಡು ಸಮಸ್ಯೆಗಳನ್ನು ಬಗೆ ಹರಿಸುವ ಪ್ರಯತ್ನ ಪಡೆಯುತ್ತವೆ.‌ಈ ಸಂಘಟನೆ ಮಾಡುವುದರಿಂದ ಅದರಿಂದ ನಮಗೆ ಏನು ಉಪಯೋಗ ಎನ್ನುವ ಬಗ್ಗೆ ತಿಳಿದುಕೊಳ್ಳಬೇಕು.

ಚಾಲಕರಿಗೆ ಗುರು ಮಾರ್ಗ. ಕಾರ್ಮಿಕರ ಮಾರ್ಗದರ್ಶನ ಹಾಗೂ ಸಾರಿಗರ ಇಲಾಖೆಯ ನೇರವು ಮುಖ್ಯವಾಗಿ ಬೇಕೆ ಬೇಕು. ಸಂಘಟನೆ ಮಾಡುವವರು ಯಾರು ಶ್ರೀಮಂತರು ಇರುವುದಿಲ್ಲ ಎಲ್ಲರು ಬಡ ಕುಟುಂಬದಿಂದ ಬಂದವರು ಹೀಗಾಗಿ ನಮ್ಮ ಸರಕಾರದಿಂದ ಸೌಲಭ್ಯಗಳ ಪಡೆದುಕೊಳ್ಳಬೇಕು.
ಕೇಂದ್ರ ಮತ್ತು ರಾಜ್ಯ ಸರಕಾರವು ಚಾಲಕರಿಗೆ ಅನುದಾನ ನೀಡುತ್ತಿದೆ. ಸರಕಾರ ಚಾಲಕರಿಗೆ ವಿವಿಧ ತರಬೇತಿಯನ್ನು ನಡೆಸುತ್ತಿದ್ದಾರೆ ಚಾಲಕರು ಅದರ ಸದುಪಯೋಗ ಪಡೆದುಕೊಳ್ಳುತ್ತಿಲ್ಲ. ಎಂದು ಹೇಳಿದರು ಸರಕಾರದ ಉಪಯೋಗ ಇರುವಾಗ ನಾವುಗಳ ಯಾಕೆ ಅದರ ಲಾಭವನ್ನು ಪಡೆದುಕೊಳ್ಳಬಾರದು ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ರವಿಕುಮಾರ. ರಾಜ್ಯ ಪದಾಧಿಕಾರಿ ಪ್ರಶಾಂತ ಸರ್. ಎಮ್ .ಡಿ. ಅಲಿ. ಲಕ್ಷ್ಮಣ ನಾಯಿಕ. ಸುರೇಶ ಅಜ್ಜಕಟ್ಟಿ . ಮಲ್ಲಿಕಾರ್ಜುನ ಪಿ ಸಿ. ಚಂದ್ರಶೇಖರ ಹಾಗೂ ವಾಣಿಜ್ಯ ಬಳಕೆಯ ಚಾಲಕ ಟ್ರೇಡ್ ಯೂನಿಯನ್ನ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.


Spread the love

About fast9admin

Check Also

ಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷ ಚನ್ನಪ್ಪ ಕೌಜಲಗಿ, ಮಹಿಳಾ ಘಟಕ ಅಧ್ಯಕ್ಷೆ ಮಹಾದೇವಿ ಉಪ್ಪಿನ ಸರ್ವಾನುಮತದ ಆಯ್ಕೆ

Spread the loveಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷ ಚನ್ನಪ್ಪ ಕೌಜಲಗಿ, ಮಹಿಳಾ ಘಟಕ ಅಧ್ಯಕ್ಷೆ ಮಹಾದೇವಿ ಉಪ್ಪಿನ ಸರ್ವಾನುಮತದ …

Leave a Reply

Your email address will not be published. Required fields are marked *