Breaking News

Recent Posts

ಶಾಲೆಗಳು ತೆರದರೆ ಜೈಲುಗಳು ಮುಚ್ಚುತ್ತವೆ : ಶ್ರೀಮತಿ ಅರೂಣಾದೇವಿ. ಗೋಕಾಕದ ಕೆ,ಎಲ್,ಇ,ಆಂಗ್ಲ ಮಾದ್ಯಮ ಶಾಲಾ ಆವರಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಬೆಳಗಾವಿ ಜಿಲ್ಲಾ ಘಟಕ ಮತ್ತು ಗೋಕಾಕ ತಾಲೂಕಾ ಘಟಕದ ಸಂಯುಕ್ತ ಆಶ್ರಯದಲ್ಲಿ ಎಸ್,ಎಸ್,ಎಲ್,ಸಿ, ಮತ್ತು ಪಿ,ಯು,ಸಿ,ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವೀರಶೈವ ಲಿಂಗಾಯತ ರಾಷ್ಟ್ರಿಯ ಉಪಾದಕ್ಷರಾದ ಪ್ರಭಾಕರ ಕೊರೆ ಮಾತನಾಡಿ,ನೂರು ವರ್ಷದಲ್ಲಿ ಶಿಕ್ಷಣ ವಂಚಿತರಾದವರು ಇವತ್ತು ಪ್ರತಿ ಹಳ್ಳಿ ಹಳ್ಳಿಯಲ್ಲೂ ಸಾವಿರಾರು ವಿದ್ಯಾರ್ಥಿಗಳಿಗೆ ಬೇದ ,ವರ್ಣ ಇಲ್ಲದೆ ಪ್ರತಿ ಸಮಾಜದವರಿಗೆ ಕೆ,ಎಲ್,ಇ,ಶಿಕ್ಷಣ ಸಂಸ್ಥೆ ಶಿಕ್ಷಣ ಕೊಂಡುವಂತಾಗಿದೆ. ಅದಲ್ಲದೆ ಬೇರೆ ಸಮಾಜದವರಕ್ಕಿಂತ ಲಿಂಗಾಯತ ಸಮಾಜದಲ್ಲಿ ಬಹಳ ಬಡವರಿದ್ದಾರೆ, ಸನ್ಮಾನ್ಯ ಯಡಿಯೂರಪ್ಪನವರು ಅಂತವರಿಗ ನಮ್ಮ ಸಮಾಜದವರನ್ನು ಹಿಂದೂಳಿದ ಪಟ್ಟಿಗೆ ಸೇರಿಸಿದರೆ ಅವರನ್ನು ನಾವೆಲ್ಲರೂ ಪೂಜಿಸುತ್ತೇವೆಂದರು. ಬೆಳಗಾವಿಯಲ್ಲಿ ವೀರಶೈವ ಲಿಂಗಾಯತರ ವಿದ್ಯಾ್ಥಿಗಳಿಗೆ ನೀಡಿದ ಹಾಸ್ಟೇಲ ಜಾಗದ ದರ ಕಡಿಮೆ ಮಾಡಲು ಯಡಿಯೂರಪ್ಪನವರ ಪುತ್ರಿ ವೇದಿಕೆ ಮೇಲೆ ಆಶಿನರಾದಂತ ಅರೂಣಾದೇವಿಗೆ ವಿನಂತಿಸಿದರು. ನಮ್ಮ ಸಮಾಜಕ್ಕೆ ಶಕ್ತಿ ಬೇಕಾಗಿದೆ, ಶಕ್ತಿ ಇಲ್ಲದೆ ಸಮಾಜದಿಂದ ಎನೂ ಮಾಡಲು ಸಾದ್ಯವಿಲ್ಲ ಎಂದರು.ನಮ್ಮಲ್ಲಿ ದಾನಿಗಳಿದ್ದಾರೆ ಆದರೆ ಮಾರ್ಗದರ್ಶನವಿಲ್ಲದ ಕಾರಣ ಹಿಂದುಳಿಯಲಿಕ್ಕೆ ಕಾರಣವಾಗಿದೆ. ಹೆಣ್ಣು ಕಲಿಯುವುದು ಎಲ್ಲರ ಉದ್ದಾರಕ್ಕಾಗಿ ಗಂಡು ಕಲಿಯುವುದು ಸ್ವಾರ್ಥಕ್ಕಾಗಿ ಎಂದು ಹೇಳುತ್ತಾ ಎಲ್ಲರೂ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಲು ವಿನಂತಿಸಿದರು. ಈ ಕಾರ್ಯಕ್ರಮದಲ್ಲಿ ಮಹಿಳಾ ಘಟಕದ ರಾಜ್ಯಾದಕ್ಷ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರಿ ಶ್ರೀಮತಿ ಅರೂಣಾದೇವಿಯವರು ಮಾತನಾಡಿ ಶಾಲೆಗಳು ತೆರೆದರೆ ಜೈಲು ಮುಚ್ಚುತ್ತವೆ, ಹೆಣ್ಣುಮಕ್ಕಳು ಕೇವಲ ಅಡುಗೆ ಮನೆಗೆ ಮಿಸಲಾಗದೆ ದರ್ಮವನ್ನು ಉಳಿಸುವ ಜೊತೆಯಲ್ಲಿ ಹೊರಗೆ ಬರಬೇಕಾಗಿದೆ,ಅದಲ್ಲದೆ ಮಲೆನಾಡಲ್ಲಿ ಬೆಳೆದ ನಾವೆಲ್ಲರೂ ಇವತ್ತು ಉತ್ತರ ಕರ್ನಾಟಕದ ವೀರಶೈವ ಲಿಂಗಾಯತರನ್ನು ನೋಡಿ ನಾವು ಸಂಸ್ಕ್ರತಿ ಕಲಿಯಬೇಕಾಗಿದೆ ಎಂದರು, ಇದೆ ಸಮಯದಲ್ಲಿ ಗೋಕಾಕ ತಾಲೂಕಿನ‌ ಪಂಚಮಸಾಲಿ ಅದ್ಯಕ್ಷರಾದ ಪ್ರಕಾಶ ಬಾಗೋಜಿಯವರು ಅಪಘಾತದಲ್ಲಿ ತನ್ನ ತಂದೆ ಕಲು ಪ್ರ್ಯಾಕ್ಚರ ಆಗಿದ್ದರಿಂದ ಆರ್ಥಿಕ ಪರಿಸ್ಥಿತಿಯ ಕಾರಣದಿಂದ ಕಲಿಯಲಿಕ್ಕೆ ತೊಂದರೆಯಲ್ಲಿದ್ದ ಅಂಕಲಗಿ ಶಾಲೆಯ ಇಂಜನಿಯರ ವಿದ್ಯಾರ್ಥಿನಿ ಸೌಮ್ಯ ಗುತ್ತಿಗೋಳಿಯವರಿಗೆ ಪ್ರತಿ ವರ್ಷದಂತೆ ಹನ್ನೊಂದು ಸಾವಿರದಾ ಒಂದು ರೂ,ಗಳನ್ನು ಸತತ ಐದು ವರ್ಷಗಳ ವರೆಗೂ ಶಿಕ್ಷಣಕ್ಕಾಗಿ ಕೊಡುವುದಾಗಿ ಘೊಷಿಸಿದರು. ಈ ಕಾರ್ಯಕ್ರಮದಲ್ಲಿ ಗದಗ ಬ್ರಹ್ಮಮಠದ ಜಗದ್ಗುರು ಶ್ರೀಸಾದಶಿವಾನಂದ ಭಾರತಿ ಸ್ವಾಮಿಗಳು ಸಾನಿದ್ಯ ವಹಿಸಿದ್ದರು ,ಬೆಳಗಾವಿ ಜಿಲ್ಲಾ ಯುವ ಘಟಕದ ಅದ್ಯಕ್ಷರಾದ ಚೇತನ ಅಂಗಡಿ,ಜಿಲ್ಲಾ ಘಟಕ್ ಅದ್ಯಕ್ಷೆ ರತ್ನಪ್ರಭಾ ಬೆಲ್ಲದ,ಮಹಿಳಾ ಜಿಲ್ಲಾ ಘಟಕದ ಅದ್ಯಕ್ಷರಾದ ಶರಣೆ ಜ್ಯೋತಿ ಭಾವಿಕಟ್ಟಿ, ತಾಲೂಕ ಮಹಾಸಭಾದ ಅದ್ಯಕ್ಷರಾದ ಸೋಮಶೇಖರ್ ಮಗದುಮ್ಮ, ತಾಲೂಕಾ ಗೌರವಾದಕ್ಷ ರಾಜು ಮುನವಳ್ಳಿ,ಚಂದ್ರಶೇಖರ ಕೊಣ್ಣೂರ, ನಂದಾ ಗಣಾಚಾರಿ.ಮಹಾಂತೇಶ ತಾಂವಶಿ,ರಾಜು ಮೂಡಲಗಿ,ರಮೇಶ ಹಿರೆಮಠ,ಬಸವರಾಜ ಹುಳ್ಳೇರ,ವಿ,ಎಸ್,ಮಗದುಮ್, ಹಾಗೂ ಇನ್ನೂಳಿದ ಗಣ್ಯರು ಉಪಸ್ಥಿತರಿದ್ದರು.