Breaking News

ಕೊಣ್ಣೂರಲ್ಲಿನ ಅದ್ದೂರಿ ಅಯ್ಯಪ್ಪಸ್ವಾಮಿ ಮಾಹಾ ಪೂಜೆ ಸಂಪನ್ನ

Spread the love

ಕೊಣ್ಣೂರಲ್ಲಿನ ಅದ್ದೂರಿ ಅಯ್ಯಪ್ಪಸ್ವಾಮಿ ಮಾಹಾ ಪೂಜೆ ಸಂಪನ್ನ

ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣದ ಶ್ರೀ ಲಕ್ಚ್ಮಿ ದೇವಸ್ಥಾನದಲ್ಲಿ ಓಂ ಶ್ರೀ ಅಯ್ಯಪ್ಪ ಸೇವಾ ಸಮಿತಿಯಿಂದ 19ನೆಯ ವರ್ಷದ ಶ್ರೀ ಅಯ್ಯಪ್ಪಸ್ವಾಮಿ ಮಹಾಪೂಜೆ ಜರುಗಿತು

ಗುರುಸ್ವಾಮಿಗಳಾದ ಹರೀಶ ಕಾಳೆ ,ಉಮೇಶ ಉಡುಪಿ, ಮಹೇಶ ಪಾಶ್ಚಾಪುರ,ರವಿ ಪಾಟೀಲ ಹಾಗೂ ಯಶರಾಜ ಗುರುಸ್ವಾಮಿಗಳ ನೇತೃತ್ವದಲ್ಲಿ ನಡೆದ ಇ ಮಹಾಪೂಜೆಯಲ್ಲಿ ವಿಘ್ನ ನಿವಾರಕ ಗಣೇಶನ ಪೂಜೆ ಮಾಡುವ ಮೂಲಕ ಮಹಾಪೂಜೆ ಪ್ರಾರಂಬಿಸಿ ಅಯ್ಯಪ್ಪ ಮತ್ತು ಸುಬ್ರಮಣ್ಯ ಭಾವ ಚಿತ್ರಗಳಿಗೆ ಪುಷ್ಪಾರ್ಚಣೆ ಮಾಡಿದರು,

ನಂತರ ಮಹಾಪೂಜೆಗೆ ಆಗಮಿಸಿದ ಮಾಲಾಧಾರಿಗಳು ಅಯ್ಯಪ್ಪ ಸ್ವಾಮಿಯ ಭಕ್ತಿ ಹಾಡುಗಳನ್ನು ಹಾಡುತ್ತಾ ಕುಣಿಯುತ್ತಾ ಆಬರಣ ತಂದು ಸ್ವಾಮಿಗೆ ಅಲಂಕರಿಸಿದರು.

ಅಯ್ಯಪ್ಪನಿಗೆ ಪ್ರೀಯವಾದ ಹಲವು ಅಭಿಷೇಕಗಳನ್ನು ಪೂರ್ಣಗೋಳಿಸಿ ಕನ್ನಿ ಸ್ವಾಮಿಯ ಜೊತೆಯಲ್ಲಿ ಹಾಗೂ ಸ್ಥಳೀಯ ಗುರುಸ್ವಾಮಿಗಳು ಮತ್ತು ಮುಖಂಡರು ಹದಿನೆಂಟು ಮೆಟ್ಟಿಲುಗಳಿಗೆ ದೀಪ ಹಚ್ಚಿ ಜ್ಯೋತಿ ಬೆಳಗಿಸಿದರು.

ಇನ್ನು ಈ ಮಹಾಪೂಜೆಗೆ ಆಗಮಿಸಿದ ಗುರುಸ್ವಾಮಿಗಳಿಗೆ ಗುರುದಕ್ಷಿಣೆ ನೀಡಿ ಸತ್ಕರಿಸಿ ಆಗಮಿಸಿದ ಸರ್ವ ಮಾಲಾಧಾರಿಗಳಿಗೆ ಮತ್ತು ಸ್ಥಳಿಯ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಗಿತ್ತು.

ಈ ಮಹಾಪೂಜೆಯಲ್ಕಿ ಆಗಮಿಸಿದ ಸುತ್ತಮುತ್ತಲಿನ ಅಯ್ಯಪ್ಪ ಸ್ವಾಮಿ ಮಾಲಾಧರಿಗಳಿಗೆ ಹಾಗೂ ಸ್ಥಳಿಯ ಭಕ್ತರಿಗೆ ಮಹಾಪ್ರಸಾದ ಎರ್ಪಡಿಸಲಾಗಿತ್ತು.


Spread the love

About Fast9 News

Check Also

ಮೋದಿಯವರನ್ನು ಸೋಲಿಸಲು ನಮ್ಮ ವಿರೋಧಿಗಳಿಗೆ ಶತ್ರು ರಾಷ್ಟ್ರಗಳ ಬೆಂಬಲ-* *ಎನ್ಡಿಎ ಅಭ್ಯರ್ಥಿ ಜಗದೀಶ್ ಶೆಟ್ಟರ್*

Spread the love*ಪ್ರಧಾನಿ ಮೋದಿಯವರಿಂದಾಗಿ ಭಾರತಕ್ಕೆ ವಿಶ್ವ ಮನ್ನಣೆ* *ಮೋದಿಯವರನ್ನು ಸೋಲಿಸಲು ನಮ್ಮ ವಿರೋಧಿಗಳಿಗೆ ಶತ್ರು ರಾಷ್ಟ್ರಗಳ ಬೆಂಬಲ-* *ಎನ್ಡಿಎ …

Leave a Reply

Your email address will not be published. Required fields are marked *