Breaking News

ಮಗಳನ್ನು ಪ್ರೀತಿಸುತ್ತಿದ್ದ  ಕಾರಣಕ್ಕೆ ಹುಡುಗನಿಗೆ ಮನಬಂದಂತೆ ಥಳಿಸಿ ಕೊಲೆ

Spread the love

ಮಗಳನ್ನು ಪ್ರೀತಿಸುತ್ತಿದ್ದ  ಕಾರಣಕ್ಕೆ ಹುಡುಗನಿಗೆ ಮನಬಂದಂತೆ ಥಳಿಸಿ ಕೊಲೆ

ಕಲಬುರಗಿ: ತಮ್ಮ ಮಗಳನ್ನು ಪ್ರೀತಿಸುತ್ತಿದ್ದ ಎನ್ನುವ ಕಾರಣಕ್ಕೆ ಹುಡುಗನಿಗೆ ಮನಬಂದಂತೆ ಥಳಿಸಿ ಕೊಲೆ ಮಾಡಿರುವ ಘಟನೆ ಕಲಬುರಗಿಯಲ್ಲಿ(kalaburgi) ನಡೆದಿದೆ. ಮೃತನನ್ನು ಅಭೀಷಕ್(18) ಎಂದು ಗುರುತಿಸಲಾಗಿದೆ.

ಅಭಿಷೇಕ್ ಹಾಗೂ ಅಪ್ರಾಪ್ತೆ ನಡುವೆ ಪ್ರೇಮ ಶುರುವಾಗಿತ್ತು. ಮೊನ್ನೆ ರಾತ್ರಿ ಬಾಲಕಿ ಪೋಷಕರು ಬರ್ತಡೇ ಪಾರ್ಟಿಗೆ ಬರುವಂತೆ ಅಭಿಷೇಕ್‌ ನಿಗೆ ಕಾಲ್‌ ಮಾಡಿ ಕರೆಸಿಕೊಂಡಿದ್ದಾರೆ. ಮನೆಗೆ ಬಂದ ಅಭಿಷೇಕ್‌ ನನ್ನು ಮನೆಯಲ್ಲಿ ಕೂಡಿ ಹಾಕಿ ರಾಡ್‌ನಿಂದ 2 ಗಂಟೆಗಳ ಕಾಲ ಮನಬಂದಂತೆ ಥಳಿಸಿದ್ದಾರೆ. ಬಾಲಕಿ ಬಿಡಿಸಿಕೊಳ್ಳಲು ಬಂದಾಗ ಕೆರ್ ಮಾಡದೇ ಮನಬಂದಂತೆ ಹೊಡೆದಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಅಭಿಷೇಕನನ್ನ ತಕ್ಷಣ ನಿರ್ಜನ ಪ್ರದೇಶದಲ್ಲಿ ಎಸೆದು ಹೋಗಿದ್ದಾರೆ. ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಹುಡುಗ ಸಾವನ್ನಪ್ಪಿದ್ದಾನೆ.

ಈ ಘಟನೆ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ (ಪ್ರೇರಣಾ) ಸೇರಿದಂತೆ ಐದು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕೊಲೆ ಮಾಡಿದ ಕೊಲೆಗಡುಕರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಅಭಿಷೇಕನ ಕುಟುಂಬಸ್ಥರು ಆಗ್ರಹಿಸಿದ್ದಾರೆ.


Spread the love

About Fast9 News

Check Also

ಆಪತ್ಬಾಂಭವ ಅರ್ಥ ಮಾಂತ್ರಿಕ ಚಿರಮೌನ; ಶಾಸಕ ಬಾಲಚಂದ್ರ ಜಾರಕಿಹೊಳಿ ಕಂಬನಿ*

Spread the love*ಆಪತ್ಬಾಂಭವ ಅರ್ಥ ಮಾಂತ್ರಿಕ ಚಿರಮೌನ; ಶಾಸಕ ಬಾಲಚಂದ್ರ ಜಾರಕಿಹೊಳಿ ಕಂಬನಿ* *ಗೋಕಾಕ್* – ಆರ್ಥಿಕತೆಯ ಪಿತಾಮಹ, ಜಾಗತಿಕ …

Leave a Reply

Your email address will not be published. Required fields are marked *