Breaking News

ಅಕ್ರಮ ಆಸ್ತಿ ಸಂಪಾದಿಸಿದ ಬ್ರಷ್ಟ ಅಧಿಕಾರಿ ಎಸಿಬಿ ಬಲೆಗೆ

Spread the love

ಅಕ್ರಮ ಆಸ್ತಿ ಸಂಪಾದಿಸಿದ ಬ್ರಷ್ಟ ಅಧಿಕಾರಿ ಎಸಿಬಿ ಬಲೆಗೆ

ಕೋಲಾರ. ರಾಜ್ಯದ ಹಲವಾರು ಕಡೆ ಎ ಸಿ ಬಿ ಅಧಿಕಾರಿಗಳು ಧಾಳಿ ನಡೆಸುತ್ತಿದ್ದು ಕೋಲಾರದಲ್ಲಿನ ಜಿಲ್ಲಾ ಅರೋಗ್ಯಾಧಿಕಾರಿಯಾದ ವಿಜಯ ಕುಮಾರ್ ರವರಿಗೆ ಸಂಬಂಧಿಸಿದ ಎಲ್ಲಾ ಕಡೆಗಳಲ್ಲಿ ಏಕ ಕಾಲಕ್ಕೆ ಧಾಳಿ ನಡೆಸಿವೆ.

ವಿಜಯ ಕುಮಾರ್ ರವರು ಕಾರ್ಯ ನಿರ್ವಹಿಸುತ್ತಿದ್ದ
ಕಚೇರಿ, ಮುಳಬಾಗಿಲಿನ ಅವರ ಮನೆ, ಖಾಸಗಿ ಆಸ್ಪತ್ರೆ, ಚಿಂತಾಮಣಿ ಅವರ ಮನೆ, ಬೆಂಗಳೂರಿನ ಪ್ಲಾಟ್ ಹಾಗೂ ಯಲಹಂಕದ ಮನೆ ಸೇರಿದಂತೆ ಒಟ್ಟು ಆರು ಕಡೆ ಏಕ ಕಾಲದಲ್ಲಿ ಎಸಿ ಬಿ ತಂಡಗಳು ಈ ಧಾಳಿ ನಡೆಸಿವೆ.

ಕಳೆದ 5 ವರ್ಷಗಳಿಂದ ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಲಿರುವ ವಿಜಯ ಕುಮಾರ್ ರವರು ಮುಳಬಾಗಲು ಹೈವೇ ರಸ್ತೆಯಲ್ಲಿರುವ ತಮ್ಮ ಪತ್ನಿ ಒಡೆತನದ ಪೂರ್ಣಿಮಾ ಆಸ್ಪತ್ರೆಯ ಕಟ್ಟಡದಲ್ಲಿನ ಮನೆಯಲ್ಲಿಯೇ
ಇದ್ದು ಶೋಧ ಕಾರ್ಯ ನಡೆಯುತ್ತಿದೆ.

ಎಸಿಬಿ ಡಿವೈಎಸ್ಪಿ ಪುರುಷೋತ್ತಮ್ ರವರ ನೇತೃತ್ವದಲ್ಲಿ ಈ ದಾಳಿ ನಡೆಯುತ್ತಲಿದ್ದು ಇನ್ಸ್ ಫೆಕ್ಟರ್ ಫಾರೂಕ್ ಹಾಗೂ ಇನ್ನಿತರೆ ಅಧಿಕಾರಿಗಳು ಭಾಗಿಯಾಗಿದ್ದಾರೆ.ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು.


Spread the love

About fast9admin

Check Also

ಬೆಮೂಲ್ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಬಾಲಚಂದ್ರ ಜಾರಕಿಹೊಳಿ ಅವಿರೋಧವಾಗಿ ಆಯ್ಕೆ*

Spread the love*ಬೆಮೂಲ್ ಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಬಾಸ್* *ಬೆಮೂಲ್ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಬಾಲಚಂದ್ರ ಜಾರಕಿಹೊಳಿ …

Leave a Reply

Your email address will not be published. Required fields are marked *