Breaking News

ಮಾಡಿದ ಸಾಲ ತಿರಿಸಲಾಗದೆ ಸಾವಿಗೆ ಶರಣಾದ ಆಟೋ ಚಾಲಕ

Spread the love

ಮಾಡಿದ ಸಾಲ ತಿರಿಸಲಾಗದೆ ಸಾವಿಗೆ ಶರಣಾದ ಆಟೋ ಚಾಲಕ

ಕಾಕತಿ : ಮಾಡಿದ ಸಾಲ ತೀರಿಸಲಾಗದೆ ಆಟೋ ಚಾಲಕನೋರ್ವ ನೇಣಿಗೆ ಶರಣಾದ ಘಟನೆ ಕಾಕತಿಯಲ್ಲಿ ಶುಕ್ರವಾರ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಕಾಕತಿ ಗ್ರಾಮದ ನಿವಾಸಿ ಆಟೋರಿಕ್ಷಾ ಚಾಲಕ ವಿಠ್ಠಲ ಕುರುಬರ(55) ಎಂದು ತಿಳಿದು ಬಂದಿದೆ.
ದುರ್ದೈವಿ ವಿಠ್ಠಲ ತನ್ನ ಸ್ವಂತ ಹೊಲದಲ್ಲಿ ಉಳಿಮೆ ಮಾಡುವುದರ ಜೊತೆಜೊತೆಗೆ ಆಟೋ ಓಡಿಸುತ್ತಿದ್ದನೆಂದು ಹೇಳಲಾಗುತ್ತದೆ. ತನ್ನ ಆಟೋ ಖರೀದಿಗೆ ಕೈಸಾಲದೊಂದಿಗೆ ಬ್ಯಾಂಕಿನಲ್ಲಿ ಕೆಲವೊಂದಿಷ್ಟು ಸಾಲ ಮಾಡಿಕೊಂಡಿದ್ದರೆಂದು, ಲಾಕ್ ಡೌನ್ ದಿಂದಾಗಿ ಯಾವುದೇ ಬಾಡಿಗೆ ಇಲ್ಲದೆ ಅಟೋ ರಿಕ್ಷಾದ ಈ.ಎಮ್.ಐ ಕಟ್ಟಲಾರದೆ ಹಾಗೂ ತನ್ನ ಕುಟುಂಬ ಜೀವನ ನಡೆಸುವುದಕ್ಕೆ ಕಷ್ಟಕರವಾಗಿ ಹಾಗು ತಾನು ಮಾಡಿಕೊಂಡ ಸಾಲವನ್ನು ತೀರಿಸಲಾರದೆ ಮನನೊಂದು ತನ್ನ ಮನೆಯಲ್ಲಿಯೇ ಯಾರು ಇಲ್ಲದ ವೇಳೆಯಲ್ಲಿ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡೊದ್ದಾರೆ ಎಂದು ತಿಳಿದು ಬರುತ್ತಿದೆ.
ತಾನು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಿಂತ ಮುಂಚೆ ಡೆತ್ ನೋಟ ಬರೆದಿಟ್ಟು. ನೇಣಿಗೆ ಶರಣಾಗಿದ್ದಾರೆ. ಘಟನಾ ಸ್ಥಳಕ್ಕೆ ಕಾಕತಿ ಪೊಲೀಸರು ಭೇಟ್ಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.


Spread the love

About Fast9 News

Check Also

ಕೊಣ್ಣೂರ ಚೆಕ್‌ ಪೊಸ್ಟಿಗೆ ತಹಸಿಲ್ದಾರ ದಿಢೀರ ಬೇಟಿ,ಪರಿಶೀಲನೆ.

Spread the loveಕೊಣ್ಣೂರ ಚೆಕ್‌ ಪೊಸ್ಟಿಗೆ ತಹಸಿಲ್ದಾರ ದಿಢೀರ ಬೇಟಿ,ಪರಿಶೀಲನೆ. ಗೋಕಾಕ : ಬೆಳಗಾವಿ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯ ಕೊಣ್ಣೂರ …

Leave a Reply

Your email address will not be published. Required fields are marked *